ಅನುಬಂಧದ ಕಾರಂಜಿ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 183

₹ 100.00




Year of Publication: 2007
Published by: ಸುಧಾ ಎಂಟರ್‍ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560085
Phone: 98454 49811

Synopsys

ಮುಚ್ಚಿದ ಕಣ್ಣನ್ನು ತೆಗೆದ ದಕ್ಷಿಣಾಮೂರ್ತಿಗಳು “ಕೆಲವು ಸತ್ಯಗಳನ್ನು ಮನುಷ್ಯ ತಿಳಿದುಕೊಂಡಾಗ ದುಃಖ ಆಗೋಲ್ಲ. ಒಂದು ಸರ್ಟನ್ ಏಜ್ವರೆಗೂ ಮನುಷ್ಯ ಸಂಪಾದನೆ ಮಾಡಿಕೋತಾ ಹೋಗುತ್ತಾನೆ. ಆಮೇಲೆ ಕಳೆದುಕೊಳ್ಳೋದು ಷುರುವಾಗುತ್ತೆ, ಉಲ್ಲಾಸ, ಉತ್ಸಾಹ, ಯೌವನ, ಆರೋಗ್ಯ, ಮುಖ್ಯವಾಗಿ ಮಕ್ಕಳ ಮೇಲಿನ ಹಿಡಿತ, ಅಧಿಕಾರ... ಹೀಗೆ ಒಂದೊಂದಾಗಿ ದೂರವಾಗುತ್ತೆ. ಮನೆಯ ಜೀವಂತಿಕೆಯಂತಿದ್ದ ಶುಭ ಗಂಡನ ಮನ್ಗೆ ಹೋದ್ಲು. ಈಗ ನರಹರಿ ಹೆಂಡತಿಯ ಜೊತೆಯಲ್ಲಿ ಬೇರೆ ಹೋಗ್ತಾ ಇದ್ದಾನೆ. ಇದು ನನ್ನ, ನಿನ್ನ ಲೆಕ್ಕಾಚಾರದಲ್ಲಿ ಇತ್ತಾ?” ಕೇಳಿದಾಗ, ಸುಕನ್ಯ ಗಂಡನ ಎದೆಯಲ್ಲಿ ಮುಖವಿಟ್ಟು ಬಿಕ್ಕಿದರು.ಇಂತಹ ಹಲವು ಸತ್ಯಗಳ ಅಗರವೇ ಈ ಕಾದಂಬರಿ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books