ಅನುಪಲ್ಲವಿ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 251

₹ 150.00




Year of Publication: 2012
Published by: ಸುಧಾ ಎಂಟರ್‍ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560092
Phone: 98454 49811

Synopsys

ದಾಂಪತ್ಯ ಈ ಕಾದಂಬರಿಯ ಕಥಾವಿಷಯ.ಹಿಂದೆ ಹೆಚ್ಚಿಗೆ ಮದುವೆಗಳನ್ನು ಹಿರಿಯರು ನಿಶ್ಚಯಿಸುತಿದ್ದರು,ಮಕ್ಕಳಿಗೆ ಅವರ ಮೇಲೆ ನಂಬಿಕೆ,ಉತ್ತಮ ವಾದವರನ್ನೇ ನಮಗೆ ಆರಿಸುತ್ತಾರೆ ಎಂದು.ಕಾಲ ,ವಿಚಾರಗಳು ಬದಲಾದಂತೆ ಆಯ್ಕೆ,ಪ್ರೇಮವಿವಾಹ,ಪ್ರೀತಿಸಿ,ತಂದೆ ತಾಯಿಯರನ್ನು ಒಪ್ಪಿಸಿ ಮದುವೆ ಆಗುವುದು ಹೀಗೆ,ಹಲವಾರು ರೀತಿಯ ಮದುವೆಗಳು ಈಗಲೂ ಹಿರಿಯರು ನೋಡಿ ಮಾಡುವ ಮದುವೆ ಗಳನ್ನು ಒಪ್ಪಿಕೊಳ್ಳುವವರೂ ಇದ್ದಾರೆ.ಆದರೆ ಮದುವೆಯ ನಂತರ ಆಗುವ ಒಳಿತು, ಕೆಡುಕುಗಳು ಎಲ್ಲಾ ರೀತಿಯ ಮದುವೆಗಳಲ್ಲೂ ಇವೆ. ಹಿರಿಯರು ಮಾಡಿದ ಮದುವೆಗಳಲ್ಲಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಮಯ ಬೇಕು .ಪರಸ್ಪರ ಪ್ರೀತಿ,ನಂಬಿಕೆ, ಗೌರವ, ಹೊಂದಾಣಿಕೆ ಎಲ್ಲವೂ ಇದ್ದಾಗ ಜೀವನ ಸೊಗಸು ಇಲ್ಲವಾದರೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಗಳಿದ್ದರೆ ಮಾತಾಡಿ,ಅವರುಗಳೇ ಬಗೆಹರಿಸಿಕೊಳ್ಳಬಹುದು,ಕೆಲವು ಸಮಸ್ಯೆಗಳು ಹಿರಿಯರ ಮುಂದೆ ಬರುತ್ತವೆ,ಅವರೂ ಬುದ್ಧಿ ಹೇಳಿ ದಂಪತಿಗಳು ಒಂದಾಗಿರುವಂತೆ ಮಾಡುತ್ತಾರೆ.ಆದರೆ ಕೆಲವು ಸಮಸ್ಯೆಗಳು ಬಗೆಹರಿಯಲಾರದ್ದು ಎನಿಸಿದಾಗ,ಇಬ್ಬರ ಒಳಿತಿಗಾಗಿ ವಿಚ್ಛೇದನಕ್ಕೆ ನಿರ್ಧರಿಸುತ್ತಾರೆ.ಈ ಕಾದಂಬರಿಯಲ್ಲಿ ಶರತ್ ಮತ್ತು ವರ್ಣ ವಿಚ್ಛೇದನಕ್ಕೆ ಸಹಿ ಹಾಕಿರುತ್ತಾರೆ, ಕಾರಣ? ಕಾದಂಬರಿಯೊಳಗಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books