ಅಪರಿಚಿತರು

Author : ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)

Pages 208

₹ 150.00




Year of Publication: 2009
Published by: ಸಂಕಲ್ಪ ಪ್ರಕಾಶನ
Address: 1,1ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ದೀಪಾಂಜಲಿ ನಗರ, ಬೆಂಗಳೂರು-560026
Phone: 080-23111088/9449800858

Synopsys

ಅಮಲು, ಕತ್ತಲೊಳಗೆ, ಅಪರಿಚಿತರು ಎಂಬ  ಮೂರು ಕಾದಂಬರಿಗಳ ಗುಚ್ಛ . 
1979ರಲ್ಲಿಯೇ ರಚಿಸಲಾಗಿ ’ಅಮಲು’ ಕಾದಂಬರಿ 1990 ರ ಜುಲೈ  'ಇದು ಉಷಾ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.  ಇದು ಕ್ಷಿತಿಜ ಅವರ ನಾಲ್ಕನೇ ಕಾದಂಬರಿ. ಯೌವನದ ಅಮಲಿನಲ್ಲಿ ನಡೆಸುವ ವ್ಯವಹಾರವು ಎದುರಾಗುವ ಹೀನ ಸಂಬಂಧದ ಬಗ್ಗೆ  ಚಿತ್ರಿಸುತ್ತದೆ.  ವೈದ್ಯಕೀಯ ಸಮಸ್ಯೆಯನ್ನು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿರುವುದು ಇದರ ವಿಶೇಷ. 1995 ರಲ್ಲಿ ಬರೆದ 'ಕತ್ತಲೊಳಗೆ' ಕಾದಂಬರಿ ನವೆಂಬರ್‌ 2003೩ ರ ನವರಾಗಸಂಗಮ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಒಂದು  ತರಬೇತಿ ಶಾಲೆಯಲ್ಲಿ ಅದರ ಮುಖ್ಯಸ್ಥ  ನಿಯಮಗಳನ್ನು ಗಾಳಿಗೆ ತೂರಿ ವೈಯಕ್ತಿಕ ಮಟ್ಟದಲ್ಲಿ ವ್ಯವಹರಿಸುವ ಪರಿಯನ್ನು ಪ್ರಾಮಾಣಿಕ ನೌಕರನೊಬ್ಬನ ಹಿನ್ನೆಲೆಯಲ್ಲಿ ಚಿತ್ರಿತವಾಗಿದೆ.  1979 ರಲ್ಲಿ ಬರೆದ ‘ಅಪರಿಚಿತರು’ ಧಾರಾವಾಹಿಯಾಗಿ ಚಂದನ (1996) ಮತ್ತು ಪ್ರಜಾರಂಗ (2002)  ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದು ಆಚಾರ್ಯ ರಜನೀಶ್ ರ  'From sex to superconscious' ಪುಸ್ತಕದ ಭಾವಾನುವಾದ. ಪೂನಾ ಆಶ್ರಮದ ಅನುಮತಿ ದೊರೆಯದ್ದರಿಂದ ಕತೆಯಾಗಿ ರೂಪಿಸಲಾಗಿದೆ.
 

About the Author

ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)
(01 June 1954)

’ಕ್ಷಿತಿಜ್ ಬೀದರ್‌’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ  ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ  (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...

READ MORE

Related Books