ಅಪರಿಮಿತ ಕತ್ತಲೆಯೊಳಗೆ ವಿಪರೀತದ ಬೆಳಕು

Author : ಬಾಲಚಂದ್ರ ಜಯಶೆಟ್ಟಿ

Pages 140

₹ 75.00




Year of Publication: 2018
Published by: ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆ
Address: ಶ್ರೀ ಮುರುಘಾಮಠ, ಮೃತ್ಯುಂಜಯ ನಗರ, ಧಾರವಾಡ.

Synopsys

ಶರಣರ ಆಚಾರ-ವಿಚಾರಗಳ ಅನನ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಹಲವು ಮಠಗಳ ಪೈಕಿ ಧಾರವಾಡದ ಶ್ರೀ ಮುರುಘಾಮಠವು ಪ್ರಮುಖವಾದದ್ದು. ಈ ಮಠಕ್ಕೆ ಸುಮಾರು 250 ವರ್ಷಗಳ ಇತಿಹಾಸವಿದೆ. 1916ರಲ್ಲಿ ಅಧಿಕಾರವಹಿಸಿಕೊಂಡ ಮೃತ್ಯುಂಜಯಪ್ಪವರ ಸಂಕಲ್ಪ ಶಕ್ತಿ ಹಾಗೂ ಮಹಾಂತಪ್ಪನವರ ಕ್ರಿಯಾಶಕ್ತಿ ಸಮ್ಮಿಳಿತವಾಗಿ ಶರಣರ ವೈಚಾರಿಕ ಶಕ್ತಿಕೇಂದ್ರವಾಗಿ ಮುನ್ಕನಡೆಯುತ್ತಾ ಬಂದಿದೆ. ಇಂದಿಗೂ ಆ ಶಕ್ತಿಯ ಅನುಭಾವ ಪಡೆಯಬಹುದು. ‘ ಅಪರಿಮಿತ ಕತ್ತಲೆಯೊಳಗೆ ವಿಪರೀತದ ಬೆಳಕು ’ ಹೆಸರೇ ಸೂಚಿಸುವಂತೆ ಸುಮಾರು 250 ವರ್ಷಗಳ ಹಿಂದೆ ಮೂರ್ತರೂಪ ಪಡೆದಿದೆ. ಈ ಮಠವು ಇಂದು ಶರಣರ ವಿಚಾರ-ಆಚಾರಗಳ ಕೇಂದ್ರವಾಗಿ ಭಕ್ತರ ಜನಮಾನಸವನ್ನು ನಿರ್ದೇಶಿಸುತ್ತಿದೆ. ಮಠ ನಡೆದು ಬಂದ ದಾರಿ ಕುರಿತು ಲೇಖಕ ಭಾಲಚಂದ್ರ ಜಯಶೆಟ್ಟಿ ಅವರು ಸವಿವರವಾಗಿ ಬರೆದಿದ್ದಾರೆ.

About the Author

ಬಾಲಚಂದ್ರ ಜಯಶೆಟ್ಟಿ
(22 November 1939)

ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ  ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು.  ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ...

READ MORE

Related Books