ಅಪ್ರತಿಮ ವೀರ ಚರಿತಂ

Author : ಎಸ್.ಜಿ. ನರಸಿಂಹಾಚಾರ್

Pages 188

₹ 2.00




Year of Publication: 1893
Published by: ಕರ್ಣಾಟಕ ಕಾವ್ಯ ಮಂಜರಿ
Address: ಮೈಸೂರು

Synopsys

ಚಿಂತಕರಾದ ಎಸ್.ಜಿ. ನರಸಿಂಹಾಚಾರ್ ಹಾಗೂ ಎಂ.ಎ. ರಾಮಾನುಜಯ್ಯಂಗಾರ್ಯ ಅವರು ಸಂಯುಕ್ತವಾಗಿ ರಚಿಸಿದ ಕೃತಿ-ಅಪ್ರತಿಮ ವೀರ ಚರಿತಂ. ಉತ್ತಮ, ಮಧ್ಯಮ, ಸಾಧಾರಣ ಕಾವ್ಯ ಲಕ್ಷಣಗಳು, ಕಾವ್ಯದ ಶಬ್ದ ಗುಣಗಳು (ಓಜಸ್ಸು, ಸಮಾಧಿ, ಪ್ರಸಾದಂ, ಉದಾರತೆ, ಕಾಂತಿ ಇತ್ಯಾದಿ), ಅರ್ಥ ಗುಣಗಳು, ಶಬ್ದಾಲಂಕಾರಗಳು, ಅರ್ಥಾಲಂಕಾರಗಳು, ಪ್ರತಿಮಾಲಂಕಾರ, ರೂಪಕಾಲಂಕಾರ, ಉಪಮಾಲಂಕಾರ, ಪರಿಣಾಮಲಂಕಾರ, ಉಲ್ಲೇಖಾಲಂಕಾರ, ದೃಷ್ಟಾಂತಾಲಂಕಾರ, ಸಮಯೋಗಿತಾಲಂಕಾರ, ಕ್ಲೇಷಾಲಂಕಾರ, ರಸಾಲಂಕಾರಗಳು, ಮಂದ್ರಾಲಂಕಾರ, ಪ್ರಮಾಣಾಲಂಕಾರಗಳು ಹೀಗೆ ಕಾವ್ಯ ಗುಣಲಕ್ಷಣಗಳಿಗೆ ಸಂಬಂಧಿಸಿದ ಎಲ್ಲ ಅಲಂಕಾರಗಳ ಸಮಗ್ರ ಅಧ್ಯಯನದ ಕೃತಿ ಇದು.

About the Author

ಎಸ್.ಜಿ. ನರಸಿಂಹಾಚಾರ್
(11 September 1862 - 22 December 1907)

ಶ್ರೀರಂಗಪಟ್ಟಣದಲ್ಲಿ ಎಸ್.ಜಿ. ನರಸಿಂಹಾಚಾರ್ಯರು 11-09-1862 ರಂದು ಜನಿಸಿದರು. ತಂದೆ ಪೂಜಾಳಂ ಮನೆತನದ ಅಳಸಿಂಗಾಚಾರ್ಯರು. ತಾಯಿ ಸೀತಮ್ಮ.ಶ್ರೀರಂಗಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಮೈಸೂರಿನಲ್ಲಿ ಬಿ.ಎ. ಪದವಿ ಹಾಗೂ 1892ರಲ್ಲಿ ಎಂ.ಎ. ಪದವೀಧರರು. ವಿದ್ಯಾ ಇಲಾಖೆಯಲ್ಲಿ ಸೇರಿ ಶ್ರೀರಂಗಪಟ್ಠಣದ ಶಾಲೆಯಲ್ಲೇ ಶಿಕ್ಷಕರು. ನಂತರ, ಮೈಸೂರು ಪ್ರಾಚ್ಯ ಕೋಶಾಗಾರದಲ್ಲಿ ಪಂಡಿತರಾಗಿ ಸೇರಿದರು.  ರಾಮಾನುಜ ಅಯ್ಯಂಗಾರ‍್ಯರೊಡನೆ ‘ಕರ್ನಾಟಕ ಕಾವ್ಯಮಂಜರಿ’ ಮಾಸಪತ್ರಿಕೆ ಆರಂಭಿಸಿದರು.  ನಂತರ, 1899ರಲ್ಲಿ ‘ಕರ್ನಾಟಕ ಕಾವ್ಯ ಕಲಾನಿ’ ಪತ್ರಿಕೆ ಪ್ರಾರಂಭಿಸಿದರು. ಕನ್ನಡ ಕವಿಗಳ ಚಂಪೂ, ಗದ್ಯ, ಪದ್ಯ, ನಾಟಕ, ಕೀರ್ತನೆ, ಶತಕ, ನಿಘಂಟುಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಕರ್ನಾಟಕ ಕಾವ್ಯಮಂಜರಿಯಲ್ಲಿ ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ, ಮಿತ್ರವಿಂದಾ ...

READ MORE

Related Books