ಅರ್ಧನಾರೀಶ್ವರ

Author : ಕೆ. ನಲ್ಲತಂಬಿ

Pages 188

₹ 150.00




Year of Publication: 2016
Published by: ಲಂಕೇಶ ಪ್ರಕಾಶನ
Address: ಬಸವನಗುಡಿ, ಬೆಂಗಳೂರು

Synopsys

ಪೆರುಮಾಳ್ ಮುರುಗನ್ ಅವರು ತಮಿಳು ಭಾಷೆಯಲ್ಲಿ ಬರೆದ ಕಾದಂಬರಿಯನ್ನು ಲೇಖಕ ಕೆ.ನಲ್ಲತಂಬಿ ಅವರು ಅರ್ಧನಾರೀಶ್ವರ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ತುಂಬಾ ವಿವಾದ ಸೃಷ್ಟಿಸಿದ ಕಾದಂಬರಿ ಇದು. ಕಾಳಿ-ಪೊನ್ನ ಎಂಬ ದಂಪತಿಗೆ ಮಕ್ಕಳಾಗಲಿಲ್ಲ ಎಂಬುದು ಹಾಗೂ ಅದೇ ಬಹುದೊಡ್ಡ ವಿಷಯವಾಗಿ ಕಾದಂಬರಿಯೊಂದನ್ನು ನಡೆಸಿಕೊಂಡು ಹೋಗುವ ರಭಸ ಈ ಕೃತಿಯ ಗಟ್ಟಿತನವಾಗಿದೆ.

ನಿಯೋಗ ಪದ್ಧತಿ ಎಂಬುದು ಪುರಾಣದ ಕಥೆಗಳಲ್ಲಿ ಹೊಸದಲ್ಲ. ಆದರೆ, ಈ ಪದ್ಧತಿಯನ್ನು ಸಾಮಾಜಿಕವಾಗಿ ಬಹಿರಂಗ ಒಪ್ಪಿಗೆಗೆ ವಿರೋಧವೇ ಇದೆ. ಪತಿಯಿಂದ ಮಕ್ಕಳಾಗದಿದ್ದರೆ ಆ ಹೆಣ್ಣು ತನಗಿಷ್ಟವಾದ ಗಂಡಿನೊಂದಿಗೆ ಕೂಡಬಹುದು ಎಂಬುದು ನಿಯೋಗ ಪದ್ಧತಿಯ ಮೂಲ ಅಂಶ. ಪ್ರಸ್ತುತ ಸಂದರ್ಭದಲ್ಲಿ, ಈ ನಿಯೋಗ ಪದ್ಧತಿಯ ನಿಯಮಗಳು ಜಾತಿ, ಲಿಂಗ, ಪಿತೃಪ್ರಧಾನ ವ್ಯವಸ್ಥೆ ಇತ್ಯಾದಿ ಹಿನ್ನೆಲೆಯಲ್ಲಿ ಹೇಗೆ ತೊಡಕಾಗುತ್ತವೆ ಎಂಬುದೂ ಈ ಕಾದಂಬರಿಯ ಗಮನಾರ್ಹ ಅಂಶ. .ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಈ ಕಾದಂಬರಿ ಹುಟ್ಟು ಹಾಕುತ್ತಿದೆ.  

About the Author

ಕೆ. ನಲ್ಲತಂಬಿ

ಕೆ. ನಲ್ಲತಂಬಿ ತಮಿಳು ಮತ್ತು ಕನ್ನಡ ಸಾಹಿತ್ಯಕ್ಕೆ ಕೊಂಡಿಯಾಗಿ ಪ್ರಮುಖರು. ಮನೆ ಭಾಷೆ ತಮಿಳು. ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಅಸ್ತಿತ್ವ  ಕಂಡು ಕೊಂಡವರು. ಅವರ ಪೂರ್ಣ ಹೆಸರು ಕಾಳಿಮುತ್ತು ನಲ್ಲತಂಬಿ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವಾರು ವಿಶಿಷ್ಟ ಕಾದಂಬರಿಗಳನ್ನು ಅನುವಾದಿಸಿ, ತಮ್ಮ ಭಾಷಾಂತರ ಕುಶಲತೆಯಿಂದ ಕನ್ನಡ ಮತ್ತು ತಮಿಳು ಸಾಹಿತ್ಯಾಸಕ್ತರಿಗೆ ಎರಡೂ ಭಾಷೆಗಳ ಸೊಗಡನ್ನು ಉಣ್ಣಿಸುತ್ತಿದ್ದಾರೆ. ಅರ್ಧನಾರೀಶ್ವರ, ಹುಣಿಸೆಮರದ ಕಥೆ, ಹಳ್ಳ ಬಂತು ಹಳ್ಳ, ಯಾದ್ವಶೇಮ್, ಕಡುಗು ವಾಂಗಿ ವಂದವಳ್ (ಸಾಸಿವೆ ತಂದವಳು) ಅವರ ಅತ್ಯಂತ ಗಮನಾರ್ಹ ಅನುವಾದಿತ ಕೃತಿಗಳು. ‘ಕೋಶಿ’ಸ್‌ ಕವಿತೆಗಳು’ ಅವರ ಸ್ವತಂತ್ರ ಕವನ ಸಂಕಲನ. ...

READ MORE

Related Books