ಅರಿಷ್ಟನೇಮಿ ಎಂಬ ರೂಪಕ

Author : ಬಾಲಕೃಷ್ಣ ಬಿ.ಎಂ. ಹೊಸಂಗಡಿ

Pages 80

₹ 60.00




Year of Publication: 2020
Published by: ಬಂಡಾರ ಪ್ರಕಾಶನ
Address: ಮಸ್ಕಿ

Synopsys

‘ಅರಿಷ್ಟನೇಮಿ ಎಂಬ ರೂಪಕ’ ಶಿಲ್ಪಿಕಥನಗಳಲ್ಲಿ ಯಾಜಮಾನ್ಯದ ವಿನ್ಯಾಸ ಕುರಿತು ತೌಲನಿಕ ಅಧ್ಯಯನ. ಬಾಲಕೃಷ್ಣ ಹೊಸಂಗಡಿ ಅವರ ಕೃತಿ. ಹಿರಿಯ ಚಿಂತಕ, ಲೇಖಕ ಪುರುಷೋತ್ತಮ ಬಿಳಿಮಲೆ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಬಾಲಕೃಷ್ಣ ಹೊಸಂಗಡಿ ಅವರ ಅರಿಷ್ಟನೇಮಿ ಎಂಬ ರೂಪಕ- ಶಿಲ್ಪಕಥನಗಳಲ್ಲಿ ಯಾಜಮಾನ್ಯದ ವಿನ್ಯಾಸ ಕುರಿತ ತೌಲನಿಕ ಅಧ್ಯಯನ ಎಂಬ ಕೃತಿ ನಮಗೆ ಮುಖ್ಯವಾಗುವುದು ಅದು ಹಿಡಿದ ನವೀನ ಹಾದಿಯಿಂದ. ಅಂದರೆ ಲೇಖಕರು ವಿಷಯ ಮಂಡನೆಗೆ ಆಯ್ದುಕೊಂಡ ವಿಧಾನವೇ ಇಲ್ಲಿ ಹೊಸತಾದದ್ದು ಎನ್ನುತ್ತಾರೆ ಬಿಳಿಮಲೆ. ಸಂಶೋಧನೆಯ ವೈಧಾನಿಕತೆಯನ್ನು ಎಚ್ಚರದಿಂದ ಮಾರ್ಪಡಿಸಿಕೊಂಡರೆ ಅದು ಓದುಗರನ್ನು ಹೊಸ ತಿಳುವಳಿಕೆಯತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತದೆ ಎಂಬ ಅಂಶ ಈ ಪುಸ್ತಕದಲ್ಲಿ ಸೊಗಸಾಗಿ ಅನಾವರಣಗೊಂಡಿದೆ. ಹೊಸಂಗಡಿಯವರು ಲಿಖಿತ ಪಠ್ಯಗಳು ಹಾಗೂ ಮೌಖಿಕ ನಿರೂಪಣೆಗಳನ್ನು ಶಿಲ್ಪ ಕಥನಗಳಿಗೆ ಬಳಸಿಕೊಂಡಿರುವುದೇ ಇಲ್ಲಿನ ವಿಶೇಷ. ಶಿಲ್ಪ ಶಾಸ್ತ್ರದ ಬಗ್ಗೆ ಅಧ್ಯಯನ ನಡೆಸಿದ ಹೆಚ್ಚಿನ ವಿದ್ವಾಂಸರು ಲಿಖಿತ ಪಠ್ಯಗಳನ್ನು ಆಧರಿಸಿಯೇ ತಮ್ಮ ಕಥನಗಳನ್ನು ಕಟ್ಟಿದ್ದಾರೆ.

About the Author

ಬಾಲಕೃಷ್ಣ ಬಿ.ಎಂ. ಹೊಸಂಗಡಿ

ಲೇಖಕ ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ರಾಧಾಕೃಷ್ಣ ಎನ್. ಬೆಳ್ಳರೂರು ಅವರ ಮಾರ್ಗದರ್ಶನದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯಕ್ಕೆ ‘ದ್ರಾವಿಡ ನವ್ಯ ಕಾವ್ಯ’ ಎಂಬ ಮಹಾ ಪ್ರಬಂಧ ಸಲ್ಲಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಹೊಸಂಗಡಿ ಅವರು ದ್ರಾವಿಡ ನವ್ಯ ಕಾವ್ಯ ಸಂಶೋಧನೆಯ ಸಂದರ್ಭದಲ್ಲೇ ಲಂಡನ್ ವಿಶ್ವವಿದ್ಯಾನಿಲಯದ ಟಿ.ಎಸ್. ಎಲಿಯಟ್ ಇಂಟರ್ ನ್ಯಾಷನಲ್ ಸಮ್ಮರ್ ಸ್ಕೂಲ್ 2013ರ ಬರ್ಸರಿ ಅವಾರ್ಡ್ ಗೂ ಪಾತ್ರರಾಗಿದ್ದಾರೆ. ಇವರ ಸಂಶೋಧನ ಲೇಖನಗಳು ದೇಶ-ವಿದೇಶಗಳ ವಿವಿಧ ಅಂತರಾಷ್ಟ್ರೀಯ ವಿಚಾರ ...

READ MORE

Related Books