ಆರೋಗ್ಯ ಆಶಯ

Author : ಶ್ರೀನಿವಾಸ ಕಕ್ಕಿಲ್ಲಾಯ

Pages 366

₹ 250.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: ಎಂಬಸಿ ಸೆಂಟರ್. ಕೆ.ಸೆಂಟ್ ರಸ್ತೆ, ಬೆಂಗಳೂರು
Phone: 080-30578023

Synopsys

ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿವನ ವ್ಯಾಪಕ ಬದಲಾವಣೆಯು ಆರೋಗ್ಯ ಕ್ಷೇತ್ರವನ್ನು ರೋಗಗ್ರಸ್ಥವಾಗಿಸಿದೆ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯರವರ ಅಭಿಪ್ರಾಯ.ಆರೋಗ್ಯ ಕ್ಷೇತ್ರವನ್ನು ಕನ್ನಡದಲ್ಲಿ ಭಿನ್ನವಾಗಿ ನೋಡಿದವರಲ್ಲಿ ಮೊದಲಿಗರು ಡಾ. ಬಿ. ಎಂ. ಹೆಗ್ಡೆ. ಇದಾದ ಬಳಿಕ ಈ ವಲಯವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟವರು ವೃತ್ತಿಯಲ್ಲಿ ವೈದ್ಯರೂ, ಪ್ರವೃತ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಕಕ್ಕಿಲ್ಲಾಯರಿಗೆ ಸಲ್ಲುತ್ತದೆ.ಇಲ್ಲಿಯ ಲೇಖನಗಳು ಕೇವಲ ಮನುಷ್ಯರ ರೋಗ ಮತ್ತು ಚಿಕಿತ್ಸೆಯ ಕುರಿತು ಮಾತ್ರ ಮಾತನಾಡುವುದಿಲ್ಲ. ಇಲ್ಲಿ ರೋಗದ ಕೇಂದ್ರ ದೇಹ ಮಾತ್ರವಲ್ಲ. ಒಂದು ವ್ಯವಸ್ಥೆಯೇ ಹೇಗೆ ವಿವಿಧ ರೋಗಗಳ ಜೊತೆಗೆ ಶಾಮೀಲಾಗಿ ಬಡ ರೋಗಿಗಳನ್ನು ಶೋಷಣೆಗೀಡು ಮಾಡಿವೆ ಎನ್ನುವುದನ್ನು ವಿವರಿಸಲಾಗಿದೆ.ಈ ಕೃತಿಯ ಮೂಲ ಉದ್ದೇಶ ನಮ್ಮ ಪರಿಸರ ಮತ್ತು ಮನೆ ಬಗ್ಗೆ ಜಾಗೃತಿಯನ್ನು ಮೂಡಿಸುವುದು.ಆರೋಗ್ಯದ ಕುರಿತಂತೆ ಮಾತನಾಡುವಾಗ ಅದು ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಎಂದೇ ನಾವು ಭಾವಿಸುತ್ತೇವೆ. ಆದರೆ ಸದ್ಯದ ದಿನಗಳಲ್ಲಿ ಸಮಾಜ, ಸಮಾಜದ ನಂಬಿಕೆಗಳು, ರಾಜಕೀಯ, ಆರ್ಥಿಕ, ಶೈಕ್ಷಣಿಕ ವ್ಯವಸ್ಥೆ ಒಂದು ದೇಶದ, ಸಮಾಜದ ಆರೋಗ್ಯ ವ್ಯವಸ್ಥೆಯನ್ನು ಹೇಗೆ ನಿರ್ಮಿಸುತ್ತವೆ, ನಿಯಂತ್ರಿಸುತ್ತವೆ ಎನ್ನುವುದನ್ನು ಈ ಕೃತಿಯು ಮನಮುಟ್ಟುವ ಶೈಲಿಯಲ್ಲಿ ವಿವರಿಸಿದೆ.

About the Author

ಶ್ರೀನಿವಾಸ ಕಕ್ಕಿಲ್ಲಾಯ

ಮಂಗಳೂರಿನ ಸ್ಪಂದನಾ ಸೆಂಟರ್‌ ಫಾರ್‌ ಮೆಟಾಬಾಲಿಕ್‌ ಮೆಡಿಸಸಿನ್‌ ಕೇಂದ್ರದಲ್ಲಿ ವೈದ್ಯರಾಗಿರುವ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಪ್ರೌಢಶಿಕ್ಷಣವನ್ನು ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಪಡೆದರು. ಮಂಗಳೂರಿನ ಕಸ್ತೂರಬಾ ಮೆಡಿಕಲ್‌ ಕಾಲೇಜಿನಲ್ಲಿ ಅಧ್ಯಯನ ನಡೆಸಿ ಎಂ.ಬಿ.ಬಿ.ಎಸ್‌. ಪದವಿ ಪಡೆದ ಶ್ರೀನಿವಾಸ ಅವರು ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್‌ ಕಾಲೇಜಿನಿಂದ 1992ರಲ್ಲಿ ಸ್ನಾತಕೋತ್ತರ (ಎಂ.ಡಿ.) ಪದವಿ ಪಡೆದರು. ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದವರಲ್ಲಿ ಒಬ್ಬರಾದ ಬಿ.ವಿ.ಕಕ್ಕಿಲ್ಲಾಯ ಅವರ ಪುತ್ರರಾಗಿರುವ ಶ್ರೀನಿವಾಸ ಅವರು ಕರ್ನಾಟಕ ವಿಧಾನಸಭೆಯಲ್ಲಿ ಬಿ.ವಿ. ಕಕ್ಕಿಲ್ಲಾಯ ಕೃತಿಯನ್ನು ಸಂಪಾದಿಸಿದ್ದಾರೆ. ...

READ MORE

Related Books