ಅರ್ಥ ಸಾಧನ

Author : ಎಂ. ವೆಂಕಟಕೃಷ್ಣಯ್ಯ

Pages 112

₹ 0.00




Year of Publication: 1915
Published by: ಎಂ. ವೆಂಕಟಕೃಷ್ಣಯ್ಯ
Address: ಮೈಸೂರು

Synopsys

ಲೇಖಕ ಎಂ. ವೆಂಕಟ ಕೃಷ್ಣಯ್ಯ ಅವರು ಹಣಕಾಸು, ವ್ಯವಹಾರ, ಅದೃಷ್ಟ ಹೀಗೆ ಹಣ ಕುರಿತು ವಿಶ್ಲೇಷಿಸಿದ ಕೃತಿ-ಅರ್ಥ ಸಾಧನ. ಅರ್ಥ, ಅದೃಷ್ಟ, ಪರೋಪಕಾರ, ಸಾಹಸ, ಸತ್ಯ, ಸಾಲ, ದುಂದುವೆಚ್ಚ, ತಂದೆ-ತಾಯಿಯರ ಕರ್ತವ್ಯ, ಆಯ-ವ್ಯಯ ವಿಮರ್ಶೆ, ಪಾಲುಗಾರಿಕೆ, ಅತಿ ಆಸೆ, ಜೀತ, ಋಣ ಪರಿಹಾರ, ಕಾಲ ಅಪ್ರಾಮಾಣಿಕತೆ ಹೀಗೆ ವಿವಿಧ ವಿಚಾರ-ಮೌಲ್ಯಗಳ ಹಿನ್ನೆಲೆಯಲ್ಲಿ ಹಣದ ಸಂಪೂರ್ಣ ಸ್ವರೂಪವನ್ನು ತೆರೆದಿಡುವ ಕೃತಿ ಇದು.

About the Author

ಎಂ. ವೆಂಕಟಕೃಷ್ಣಯ್ಯ
(20 August 1844 - 08 November 1933)

ಕನ್ನಡದಲ್ಲಿ ಸ್ವತಂತ್ರ ಪತ್ರಿಕೆ ‘ಸಾಧ್ವಿ’ ಆರಂಭಿಸಿದ ಎಂ. ವೆಂಕಟಕೃಷ್ಣಯ್ಯ ಅವರು ‘ತಾತಯ್ಯ’ ಎಂದೇ ಪ್ರಸಿದ್ಧರು. ಪತ್ರಿಕಾ ಪ್ರಪಂಚದ ಭೀಷ್ಮರು ಎಂದು ಗುರುತಿಸಲಾಗುತ್ತಿದೆ. ಮೈಸೂರು ಸರ್ಕಾರದ ಪ್ರತಿನಿಧಿಯಾಗಿದ್ದರು. ನ್ಯಾಯ ವಿಧಾಯಕಸಭೆ, ಸಂಪದಭ್ಯುದಯ ಸಭೆ, ಜಿಲ್ಲಾಮಂಡಳಿ, ಪೌರ ಪರಿಷತ್ತು, ಲಿಟರರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದು, ಮೈಸೂರು ಅನಾಥಾಲಯದ ಸ್ಥಾಪಕರಲ್ಲಿ ಒಬ್ಬರು. ಎಂ. ವೆಂಕಟಕೃಷ್ಣಯ್ಯ ಜನಿಸಿದ್ದು 1844ರ ಆಗಸ್ಟ್ 20ರಂದು ಹೆಗ್ಗಡೆದೇವನ ಕೋಟೆ ತಾಲ್ಲೂಕಿನ ಮೊಗ್ಗೆ ಗ್ರಾಮದಲ್ಲಿ. ತಂದೆ ಸುಬ್ಬಯ್ಯ, ತಾಯಿ ಭಾಗೀರಥಮ್ಮ. ಮೆಟ್ರಿಕ್ಯುಲೇಷನ್ ಪರೀಕ್ಷೆ ನಂತರ ಮೈಸೂರಿನಲ್ಲಿ ಮರಿಮಲ್ಲಪ್ಪ ಶಾಲೆಯಲ್ಲಿ ಉಪಾಧ್ಯಾಯರಾದರು. ಅನಂತರ ಹಲವಾರು ಶಾಲೆಗಳಲ್ಲಿಸುಮಾರು 50 ವರ್ಷ ಸೇವೆ ನಂತರ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದರು. ಜತೆಗೆ ಕನ್ನಡದಲ್ಲಿ ಸ್ವತಂತ್ರ ಪತ್ರಿಕೆ ...

READ MORE

Related Books