ಅರ್ಥಪೂರ್ಣ ಬದುಕು, ಸುಖ ಸಂತೋಷ ಬೇಕೆ? ದುಃಖ ದುಮ್ಮಾನ ಬೇಡವೇ?

Author : ಸಿ.ಆರ್. ಚಂದ್ರಶೇಖರ್

Pages 83

₹ 50.00




Year of Publication: 2017
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಅರ್ಥಪೂರ್ಣ ಬದುಕು ಸುಖ ಸಂತೋಷ ಬೇಕೆ? ದುಃಖ ದುಮ್ಮಾನ ಬೇಡವೇ?. ಮನುಷ್ಯನ ಮೂಲ ಗುಣ ಎಂದರೆ ಆತ ಸುಖವನ್ನೇ ಬಯಸುತ್ತಾನೆ. ದುಃಖವನ್ನು ಎಂದಿಗೂ ಇಚ್ಛೆ ಪಡಲಾರ. ಆದರೆ, ಸುಖ-ದುಃಖವನ್ನು ಹೇಗೆ ಸ್ವೀಕರಿಸಬೇಕು ಎಂಬುದೂ ಸಹ ಒಂದು ಕಲೆ ಹಾಗೂ ವಿಜ್ಞಾನ. ಆಗಲೇ ಆರ್ಥಪೂರ್ಣ ಬದುಕಾಗಲು ಸಾಧ್ಯ. ಇಲ್ಲದಿರೆ, ಅದು ಕೊನೆಯ ಸಮಯದಲ್ಲಿ ದುರಂತವನ್ನೇ ತಂದೊಡ್ಡುತ್ತದೆ. ಏಕೆಂದರೆ, ಸುಖ-ದುಃಖಗಳು ನಮ್ಮ ಜೊತೆ ಬಹು ಕಾಲ ಇರಲಾರವು. ಇಂತಹ ವಿಚಾರಗಳ ಕುರಿತು ಮನೋವೈಜ್ಞಾನಿಕವಾಗಿ ನೀಡಿದ ಮಾಹಿತಿಯ ಕೃತಿ ಇದು.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books