ಅಸಹಿಷ್ಣುತಾ ನೌಟಂಕಿ

Author : ಪ್ರೇಮಶೇಖರ

Pages 144

₹ 144.00




Year of Publication: 2020
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020

Synopsys

ಗ್ರಾಮೀಣ ವಿದ್ಯಮಾನಗಳ ಬಗೆಗಿನ ಲೇಖನಗಳು ಎಂಬ ಉಪಶೀರ್ಷಿಕೆಯಡಿ ಲೇಖಕ ಪ್ರೇಮಶೇಖರ ಅವರು ಬರೆದ ಕೃತಿ-ಅಸಹಿಷ್ಣುತಾ ನೌಟಂಕಿ. ಸ್ವತಃ ಲೇಖಕರು ತಮ್ಮ ನುಡಿಯಲ್ಲಿ ‘ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಅತ್ತು ಇಲ್ಲಿರಲಾಗದೇ ಪಾಕಿಸ್ತಾನಕ್ಕೆ ಹೋಗ ಬಯಸಿದರೆ ಅವರಿಗೆ ಅಲ್ಲಿ ಸ್ವಾಗತವಿದೆಯೇ? ಇವರಿಗೆ ಕಳೆದ ಏಳು ದಶಕಗಳಲ್ಲಿ ಅಲ್ಲಿ ಏನಾಗಿದೆ ಎಂಬುದರ ಅರಿವೇ ಇಲ್ಲ. ಪಾಕಿಸ್ತಾನ ವಿಭಜನೆಯ ಆರಂಭದಲ್ಲಿ ಇಲ್ಲಿಂದ ವಲಸೆ ಹೋದ ಭಾರತೀಯ ಮುಸ್ಲಿಂರನ್ನು ಅಲ್ಲಿಯ ಜನ ತಮ್ಮವರೆಂದು ಒಪ್ಪಿಕೊಂಡಿಲ್ಲ. ಇವರನ್ನು ‘ಮೊಹಾಜೆರ್ ’ ಎಂದು (ನಿರಾಶ್ರಿತರು) ಕರೆಯುತ್ತಾರೆ. ಇವರನ್ನು ಭಾರತಕ್ಕೆ ಹಿಂದಿರುಗಿ ಎಂದು ಹೇಳಲಾಗುತ್ತಿದೆ’ ಎಂದು ಪ್ರಸ್ತಾಪಿಸಿದ ವಿಷಯಗಳು ಈ ಕೃತಿಯಲ್ಲಿವೆ.

About the Author

ಪ್ರೇಮಶೇಖರ
(22 June 1960)

ಹೊರನಾಡ ಕನ್ನಡಿಗ ಪ್ರೇಮಶೇಖರ ಪಠ್ಯವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಸಂಶೋಧನಾ ಲೇಖನಗಳನ್ನು ಹಾಗೂ ಕನ್ನಡದಲ್ಲಿ ಕಥೆಕಾದಂಬರಿಗಳನ್ನು ಬರೆಯುವುದರ ಮೂಲಕ ಬರವಣಿಗೆಯನ್ನಾರಂಭಿಸಿದವರು.. ಹುಟ್ಟಿದ್ದು 1960 ಜೂನ್ 22 ಕೊಳ್ಳೇಗಾಲದಲ್ಲಿ. ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿ, ಇಪ್ಪತ್ತೆರಡು ವರ್ಷಗಳ ಸುಧೀರ್ಘ ಕಾಲ ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಬೋಧಿಸಿ 2012ರಲ್ಲಿ ಸ್ವಯಂನಿವತಿ ಪಡೆದುಕೊಂಡಿದ್ದಾರೆ. ಪತ್ರಿಕಾರಂಗದಲ್ಲಿರುವ ಹಿತೈಷಿಗಳ ಬಯಕೆಯಂತೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಕನ್ನಡದಲ್ಲಿ ಐನೂರರಷ್ಟು ಲೇಖನಗಳನ್ನು ಬರೆದಿದ್ದಾರೆ. ಇದುವರೆಗೆ ಎರಡು ಕಾದಂಬರಿಗಳನ್ನೂ, ಹತ್ತು ಕಥಾ ಸಂಕಲನಗಳನ್ನೂ, ಹನ್ನೊಂದು ಲೇಖನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಕಥಾರಚನೆಯಲ್ಲಿ ತರಬೇತಿ ನೀಡುವ ಕಾರ್ಯಾಗಾರಗಳನ್ನು ...

READ MORE

Related Books