ಅಶ್ವತ್ಥಾಮ

Author : ಪಿ. ವಿ. ನಾರಾಯಣ

Pages 46

₹ 6.00




Year of Publication: 1987
Published by: ಬಿ.ಎಂ.ಶ್ರೀ ಪ್ರತಿಷ್ಟಾನ

Synopsys

ಅಶ್ವತ್ಥಾಮ ಪಿ.ವಿ ನಾರಾಯಣ ಅವರ ಕೃತಿಯಾಗಿದೆ. 'ಅಶ್ವತ್ಥಾಮನ್' ನಾಟಕದಲ್ಲಿ ಶ್ರೀಯವರು ಬಳಸುವ ಹಳಗನ್ನಡದ ಬಗ್ಗೆ ಒಂದೆರಡು ಮಾತು. ಅವರ ಸಂಭಾಷಣಾ ರಚನೆ ತುಂಬ ಬಿಗಿಯಾದದ್ದು, ಪದಗಳ ಜೋಡಣೆ ಅಚ್ಚುಕಟ್ಟಾದದ್ದು ಎಂಬುದರಲ್ಲಿ ಎರಡುಮಾತಿಲ್ಲ. ಆದರೆ ಹಳಗನ್ನಡ ಬೇಕಾಗಿತ್ತೇ ? 'ಇಂಗ್ಲೀಷ್ ಗೀತ'ಗಳಲ್ಲಿನ ಅತ್ಯುತ್ತಮ ರಚನೆಗಳು ಸರಳವಾದ ಹೊಸಗನ್ನಡವಾಗಿದ್ದರೂ, ಅವರ ನಾಟಕಗಳ ಭಾಷೆ ಹಾಗೂ ಸ್ವತಂತ್ರ ರಚನೆಗಳ ಭಾಷೆ ಹಳಗನ್ನಡವಾಗಲು ವಿಶೇಷ ಕಾರಣಗಳಿವೆಯೇ ? ಕನ್ನಡ ಸಾಹಿತ್ಯದ ಆಧುನಿಕತ್ವಕ್ಕೆ ಹೆಣಗಿದ ಶ್ರೀ ನಾಟಕಗಳ ಭಾಷೆಯನ್ನು ಮಾತ್ರ ಏಕೆ ಹಳಗನ್ನಡ ವಾಗಿಸುತ್ತಾರೆ? 'ಗದಾಯುದ್ಧ'ದ ಪ್ರಭಾವದಿಂದ, ಅದನ್ನು ನಾಟಕರೂಪಕ್ಕಿಳಿಸು ವಾಗ ಪಡೆದ ಅನುಭವದಿಂದ ಇನ್ನೆರಡು ನಾಟಕಗಳಲ್ಲಿಯೂ ಹಳಗನ್ನಡ ಬಳಸಿದರೇ ? ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ನಾಟಕದ ವಸ್ತು ಸಮಕಾಲೀನವಾಗಿರದುದರಿಂದ, ಹಳಗನ್ನಡವು ದೂರ ವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, ದುರಂತ ನಾಟಕದ ಗಾಂಭೀರ್ಯಕ್ಕೆ ಹೊಸಗನ್ನಡಕ್ಕಿಂತಲೂ ಹಳಗನ್ನಡವೇ ಹೆಚ್ಚು ಸೂಕ್ತವಾದುದು .

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books