ಆಸ್ಸಾಮಿ ಕಥೆಗಾರ್ತಿಯರ ಆಯ್ದ ಕಥೆಗಳು

Author : ಡಿ.ಎನ್‌. ಶ್ರೀನಾಥ್‌

Pages 208

₹ 145.00




Year of Publication: 2016
Published by: ಕಣ್ವ ಪ್ರತಿಷ್ಠಾನ,
Address: ಚಂದ್ರಾ ಲೇಔಟ್, ವಿಜಯನಗರ, ಬೆಂಗಳೂರು-560040

Synopsys

ಲೇಖಕ -ಅನುವಾದಕ ಡಿ.ಎನ್. ಶ್ರೀನಾಥ ಅವರ ಆಸ್ಸಾಂ ರಾಜ್ಯ ಕಥೆಗಾರರು ಬರೆದ ಕಥೆಗಳು ಹಿಂದಿಗೆ ಅನುವಾದಗೊಂಡಿದ್ದು, ಆ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ-ಆಸ್ಸಾಮಿ ಕಥೆಗಾರ್ತಿಯರ ಆಯ್ದ ಕಥೆಗಳು. ಭಾರತೀಯ ಭಾಷೆಗಳ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಲೇಖಕರಿಗೆ ಸಲ್ಲುತ್ತದೆ. ಅನುವಾದಿತ ಈ ಎಲ್ಲ ಕಥೆಗಳು ಅಸ್ಸಾಮಿ ಜನರ ಸಂಸ್ಕತಿ, ಸಾಮಾಜಿಕ ಜನಜೀವನ, ಬದುಕು ಸ್ವೀಕರಿಸುವ ವಿಶೇಷ ಗ್ರಹಿಕೆ ಇತ್ಯಾದಿ ಅಂಶಗಳು ಕಥೆಗಳ ಪ್ರಮುಖ ಅಂಶಗಳಾಗಿವೆ.

About the Author

ಡಿ.ಎನ್‌. ಶ್ರೀನಾಥ್‌
(03 December 1950)

ಅನುವಾದಕ ಶ್ರೀನಾಥ್‌ ಅವರು ಹುಟ್ಟಿದ್ದು 1950 ಡಿಸೆಂಬರ್‌ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್‌, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ"  ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ...

READ MORE

Related Books