ಅತ್ರಿಸೂನು ಉವಾಚ

Author : ಜಿ.ಟಿ. ನಾರಾಯಣರಾವ್

Pages 56

₹ 30.00




Year of Publication: 2008
Published by: ಅತ್ರಿ ಬುಕ್ ಸೆಂಟರ್
Address: ಶರಾವತಿ ಕಟ್ಟಡ, ಬಲ್ಮಠ ರೋಡ್, ಮಂಗಳೂರು. 575001

Synopsys

ವಿಜ್ಞಾನ ಕುರಿತ ಚಿಂತನೆಗಳ ವೇಳೆ ಲೇಖಕ ಜಿ.ಟಿ. ನಾರಾಯಣರಾವ್‌ ಅವರೊಳಗೆ ಹುಟ್ಟಿಕೊಂಡ ನಾಲ್ಕು ಸಾಲಿನ ಹನಿಗವಿತೆಗಳೇ ’ಅತ್ರಿಸೂನು ಉವಾಚ’. ಆಧುನಿಕ ಕನ್ನಡದ ತತ್ವಪದದಂತೆಯೇ ಇರುವ ಮಂಕುತಿಮ್ಮನ ಕೃತಿಯಿಂದ ಪ್ರಭಾವಿತರಾದ ಅವರು ಅದೇ ಧಾಟಿಯಲ್ಲಿ ಈ ಚುಟುಕುಗಳನ್ನೂ ಹೇಳುವ ಯತ್ನ ಮಾಡಿದ್ದಾರೆ. 

ರಾಹುಕೇತುಗಳೆಂಬ ರಕ್ಕಸರು ನುಂಗುವರು
ಗ್ರಹಣ ಕಾಲದಿ ಸೂರ್ಯ ಚಂದ್ರರೆನ್ನುತ ಬಲು 
ತಹತಹಿಸಿ ವ್ರತನಿಯಮ ಬಲಿ ಹೋಮವೆಸಗುವವ
ಸಹಜಮತಿ ಶೂನ್ಯ ಗಾವಿಲ ಕಣಾ ಅತ್ರಿಸೂನು

ಎಂಬಂತಹ ಸಾಲುಗಳಿಂದ ಹಿಡಿದು 

ಹೂಂಕಾರದಾರ್ಭಟೆಗೆ ಮಂಕಾಯಿತು ಓಂಕಾರ
ಸಂಕಷ್ಟ, ಭಸ್ಮಾಸುರನ ಹಸ್ತ ಅತ್ರಿಸೂನು 


ಎಂಬುವವರೆಗೆ ವಿಜ್ಞಾನ- ತತ್ವಜ್ಞಾನದ ಉಯ್ಯಾಲೆಯಲ್ಲಿ ಓದುಗರು ಜೀಕಬಹುದು. 

About the Author

ಜಿ.ಟಿ. ನಾರಾಯಣರಾವ್
(30 January 1926)

ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...

READ MORE

Related Books