ಅತಿಕ್ರಮಣ

Author : ವಿವೇಕಾನಂದ ಕಾಮತ್

Pages 236

₹ 125.00




Year of Publication: 2003
Published by: ಗೀತಾಂಜಲಿ ಪಬ್ಲಿಕೇಷನ್ಸ್
Address: ನಂ. 134, 8ನೇ ಕ್ರಾಸ್, 4ನೇ ಮುಖ್ಯ ರಸ್ತೆ, ಗೋವಿಂದರಾಜನಗರ ಬೆಂಗಳೂರು – 560040

Synopsys

ಇದೊಂದು ಸಿನಿಮೀಯ ಕಾದಂಬರಿ. ನಂಬಿಕೆಯಿಂದ ಆಧಾರಕ್ಕಾಗಿ ಹಿಡಿದ ಹಗ್ಗವೇ ಹಾವಾದರೆ..? ಸುಂದರ ರೂಪಕ್ಕೆ ಮರುಳಾಗಿ ಒಬ್ಬನನ್ನು ಮದುವೆಯಾಗುವ ನಾಯಕಿಗೆ ತಾನು ಮೋಸ ಹೋಗಿದ್ದು ಎಲ್ಲಾ ಅವನ ಷಡ್ಯಂತ್ರದ ಪಾತ್ರವೆಂದು ತಿಳಿದಾಗ ಕಾಲ ಮಿಂಚಿ ಹೋಗಿರುತ್ತದೆ. ಕಳೆದುಕೊಂಡದ್ದನ್ನೆಲ್ಲಾ ಪಡೆಯಲು ಅವಳಿಗೆ ಆಧಾರವಾಗಿ ನಿಲ್ಲುವ ಸ್ನೇಹಿತನ ನೆರವಿನಿಂದ ತನ್ನ ಬಾಳಲ್ಲಿ ಅತಿಕ್ರಮಿತ ದುರುಳನನ್ನು ಹೊರಗಟ್ಟಲು ಸಾಧ್ಯವಾಗುತ್ತದೆಯೇ..? ಅವಳ ಬದುಕನ್ನು ಅವಳು ಮತ್ತೆ ಕಟ್ಟಿಕೊಂಡಳೇ..? ಸುಧಾ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಿತ ಕ್ರತಿ ಇದು.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books