ಔದುಂಬರ ಗಾಥೆ ಸಂಪುಟ 8

Author : ವಾಮನ ಬೇಂದ್ರೆ

Pages 272

₹ 200.00




Year of Publication: 2006
Published by: ವರಕವಿ.ಡಾ.ದ.ರಾ.ಬೇಂದ್ರೆ ಸಮಶೋಧನಾ ಸಂಸ್ಥೆ
Address: ವಿಶ್ವಶ್ರಮ ಚೇತನ, ಗೋಕುಲ ರಸ್ತೆ, ಹುಬ್ಬಳ್ಳಿ-580 030

Synopsys

ವಾಮನ ಬೇಂದ್ರೆ ಅವರು ಅಂಬಿಕಾತನಯದತ್ತರ ಸಮಗ್ರ ಸಖೀಗೀತ ‘ಔದುಂಬರ ಗಾಥೆ’ ಸಂಪುಟ 8ರ ಸಂಪಾದಕರಾಗಿದ್ದಾರೆ. ಈ ಕೃತಿಯ ದ.ರಾ ಬೇಂಧ್ರೆಯವರ ಜೀವನ ಮಹಾಕಾವ್ಯವಾಗಿದ್ದು, ಪರಿವಿಡಿಯಲ್ಲಿ ಪೂರ್ವ ಸಖೀಗೀತ, ಸಖೀಗೀತ, ಸಂತತಿ ಗೀತ, ಮೊಮ್ಮಕ್ಳ ಚಿಂತನ, ಅರ್ಪಣ, ಉತ್ತರ ಸಖೀಗೀತ, ಮರಣೋತ್ತರ ಸಖೀಗೀತ, ‘ಸಖೀಗೀತ’ದ ಇತರ ಕವನಗಳು ಎಂಬ ಪ್ರಮುಖ ಭಾಗಗಳಿವೆ. ಪ್ರತಿ ಭಾಗದಲ್ಲೂ ಬಿಡಿ ಕವನಗಳ ಸಂಗ್ರಹಗಳಿವೆ. ಅವುಗಳಲ್ಲಿ ಪ್ರಮುಖವಾದವು ಬಿಸಿಲುಗುದುರೆ, ನನ್ನ ಕೈಯ ಹಿಡಿದಾಕೆ!, ನಾನೊಂದು ನೆನೆದರೆ, ನಾನು ಬಡವಿ, ದೀಪ, ಮನದನ್ನೆ, ಸಂಸಾರ, ಸಸಾರ ಅಲ್ಲವೋ ಸಂಸಾರ, ಫಜಾರಗಟ್ಟೀ ಮುಟ್ಟೋಣು ಬಾ, ಗೃಹಿಣಿ, ಜೀವದ ಗೆಳತಿ, ಬರುವದೇನೆ ನೆಪ್ಪಿಗೆ..

About the Author

ವಾಮನ ಬೇಂದ್ರೆ
(28 July 1935 - 28 September 2016)

ಪ್ರಾಧ್ಯಾಪಕ, ಸಾಹಿತಿ ವಾಮನ ಬೇಂದ್ರೆ ಅವರ (ಜನನ: 1935 ಜುಲೈ 28 ) ಹುಟ್ಟೂರು ಹಾವೇರಿ ಜಿಲ್ಲೆಯ ರಾಣಿ ಬೆನ್ನೂರು. ತಂದೆ ದ.ರಾ.ಬೇಂದ್ರೆ, ತಾಯಿ ಲಕ್ಷ್ಮೀಬಾಯಿ. ಪ್ರಾರಂಭಿಕ ಶಿಕ್ಷಣ ಗದಗದಲ್ಲಿ ನೆರವೇರಿತು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರರು. ಪುಣೆ ವಿಶ್ವವಿದ್ಯಾಲಯಕ್ಕೆ ‘ಲಕ್ಷ್ಮೀಶನ ಜೈಮಿನಿ ಭಾರತ - ಒಂದು ಅಧ್ಯಯನ ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದರು.  ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ ಭಾಷೆಗಳ ಮೇಲೆ ಪ್ರಭುತ್ವವಿತ್ತು. ಸಂಗೀತ, ನಾಟಕ, ಭಾಷಣದಲ್ಲೂ ಆಸಕ್ತಿಯಿದ್ದು, ‘ತೊದಲು’ ಅವರ ಮೊದಲ ಕವನ. ಸಂಕಲನ.   ‘ಕುಶಲಕವಿ ಲಕ್ಷ್ಮೀಶ, ಲಕ್ಷ್ಮೀಶ ಕವಿ-ಕಾವ್ಯ ಪರಂಪರೆ, ಲಕ್ಷ್ಮೀಶ : ಒಂದು ಅಧ್ಯಯನ, ...

READ MORE

Related Books