ಅವ್ವನ ಪಾದದಡಿಯ ಸ್ವರ್ಗ

Author : ಹೆಬಸೂರ ರಂಜಾನ್

Pages 82

₹ 100.00




Year of Publication: 2021
Published by: ಉತ್ತರ ಪ್ರಕಾಶನ
Address: ಕೃಷ್ಣಾ ನಗರ, ಎ.ಪಿ.ಎಂ.ಸಿ ಹತ್ತಿರ, ಜಕ್ಕನಕಟ್ಟಿ. ಶಿಗ್ಗಾಂವ ತಾಲೂಕು, ಹಾವೇರಿ ಜಿಲ್ಲೆ, 581205,
Phone: 8951133981

Synopsys

ಕವಿ ಹೆಬಸೂರ ರಂಜಾನ್ ಸಂಪಾದಕತ್ವದ ’ ಅವ್ವನ ಪಾದದಡಿಯ ಸ್ವರ್ಗ’ ಕೃತಿಯು ಗಜಲ್ ಕವನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಕಾಶೀನಾಥ್ ಅಂಬಲಗಿ ಅವರು, ಈಗ ಪ್ರೀತಿ ಪ್ರೇಮಗಳೇ ಜೌಟ್ ಆಫ್ ಡೇಟ್ ಆಗಿ ಅಸಹನೆ ಎಲ್ಲೆಲ್ಲಿಯೂ ಸಂಭ್ರಮಿಸುತ್ತಿರುವಾಗ ಗೆಳೆಯ ಹೆಬಸೂರ ರಂಜಾನ್ ಅವರು 65 ಗಜಲ್ ಕಾರರ ಅತ್ಯಂತ ಸಂವೇದನಾಶೀಲ ಕವಿಗಳ 61 ಗಜಲ್ ಗಳ ’ ರಂಗಿನ ಗುಲ್ ದಸ್ತಾ’ ನಮ್ಮೆದುರಿಗೆ ಇಟ್ಟಿದ್ದಾರೆ. ಕಾವ್ಯ ಕಾರ್ಮಿಕರಾದ ನನ್ನ ಪ್ರೀತಿಯು ಕವಿ ಮಿತ್ರರೇ ’ ಕವಿತೆಗಳಿಲ್ಲದಿದ್ದರೆ ಯುದ್ದಗಳು ನಿಲ್ಲಿಸಲಾಗುವುದಿಲ್ಲ ಕವಿತೆಗಳಿಲ್ಲದಿದ್ದರೆ ತಾಯಿ ಮಕ್ಕಳಿಗೆ ಆಶೀರ್ವಾದ ಮಾಡಲಾಗುವುದಿಲ್ಲ ಕವಿತೆಗಳಿಲ್ಲದಿದ್ದರೆ ಮನುಷ್ಯ ಏನಾದರೂ ಆಗಬಹುದು ಆದರೆ ಆತ ಮನುಷ್ಯನಾಗಿ ಉಳಿಯುವುದಿಲ್ಲ. ಆದ್ದರಿಂದ ಕಾವ್ಯ ಎನ್ನುವುದು ’ಕಾವ್ಯಾಧ್ಯಾತ್ಮವೋ’ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕಾಗಿದೆ. ಇಲ್ಲಿನ ಎಲ್ಲ ಗಜಲ್ ಗಳು ಈ ರೀತಿಯ ಕಾವ್ಯಾಧ್ಯಾತ್ಮದ ಅನುಭಾವವನ್ನು ಒದಗಿಸುತ್ತದೆ . ಕನ್ನಡ ಕಾವ್ಯದಲ್ಲಿ ಈಗ ಗಜಲ್ ಘಮಲು ಎಲ್ಲಡೆಗೆ ಪಸರಿಸಿದೆ. ಗಜಲ್ ಎನ್ನುವುದು ಕಾವ್ಯ ಸಂಸ್ಕೃತಿಯನ್ನು ತಾಯಿಯ ವಾತ್ಸಲ್ಯದಂತೆ ಕಟ್ಟುವ ಕಾವ್ಯ ಪ್ರಕಾರ. ಕಾವ್ಯ ಸಂಸ್ಕೃತಿ ಎಂದರೆ ನಿಜವಾದ ಮನುಷ್ಯನಾಗುವ ಪಯಣವಾಗಿದೆ. ಅದು ಇಲ್ಲಿ ವಿಸ್ತೃತವಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

About the Author

ಹೆಬಸೂರ ರಂಜಾನ್
(22 July 1981)

ಕವಿ ಹೆಬಸೂರ ರಂಜಾನ್ ಅವರು (ಜನನ: 1981 ಜುಲೈ 22) ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರಿನವರು. ಹುಟ್ಟೂರಿನಲ್ಲಿ ಪ್ರಾಥಮಿಕ ದಿಂದ ಪ.ಪೂ. ಶಿಕ್ಷಣ ನಂತರ ಹುಬ್ಬಳ್ಳಿಯ  ಶ್ರೀ ಕಾಡಸಿದ್ಧೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದವಿ, ಕ.ವಿ.ವಿ.ದಿಂದ ಬಾಹ್ಯ ವಿದ್ಯಾರ್ಥಿಯಾಗಿ ಸ್ನಾತಕೋತ್ತರ ಪದವಿ ಪಡೆದರು. ಪ್ರಸ್ತುತ ಶಿಗ್ಗಾಂವ್ ಪ.ಪೂ.ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ. ‘ನೆನಪು ತಂತಿ ಮೀಟುತ್ತಿತ್ತು’ ಅವರ ಮೊದಲ (2006) ಕವನ ಸಂಕಲನ. ‘ಅಂತರಂಗದ ಮೃದಂಗ’ ಅವರ ಎರಡನೇ ಕವನ ಸಂಕಲನ. ಹಾವೇರಿ ಜಿಲ್ಲೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ‘ಮಂಜಿನೊಳಗಣ ಕೆಂಡ’ ಅವರ ಇತ್ತಿಚಿನ ಕೃತಿ. ...

READ MORE

Related Books