ಬಿ.ಜಿ.ಎಲ್. ಸ್ವಾಮಿ

Author : ಟಿ.ಜಿ. ಶ್ರೀನಿಧಿ

Pages 48

₹ 27.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಬಿ.ಜಿ.ಎಲ್. ಸ್ವಾಮಿ ಅವರ ಕುರಿತು ಲೇಖಕ ಟಿ.ಜಿ. ಶ್ರೀನಿಧಿ ಅವರು ಬರೆದ ಕೃತಿ ಇದು. ಬಿ.ಜಿ.ಎಲ್. ಸ್ವಾಮಿ ಅವರ ‘ಹಸುರು ಹೊನ್ನು‘ ವಿಜ್ಞಾನ ಪ್ರವಾಸೋದ್ಯಮ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಈವರೆಗೂ ಇಂತಹ ಪ್ರಶಸ್ತಿಗೆ ಭಾಜನರಾದ ಲೇಖಕರು ಎಂದರೆ ಬಿಜಿಎಲ್ ಸ್ವಾಮಿ. ಕನ್ನಡದ ಮಟ್ಟಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಪ್ರಥಮ ತಂದೆ ಮಕ್ಕಳ ಜೋಡಿ. ಸ್ವಾಮಿಯವರ ವಿಜ್ಞಾನ ಬರಹಗಳ ಹಾಗೆ ಅವರ ಸಾಹಿತ್ಯ ಬರಹಗಳೂ ಪ್ರಸಿದ್ಧ. ತಮಿಳು ಭಾಷೆಯ ಪ್ರಾಚೀನತೆಯ ‘ಕುಮರಿಕಾಂಡಂ‘ ಕಥೆ ಕಟ್ಟುವ ಇರಾವಂತಂ ಮಹಾದೇವನ್ ಹಾಗೂ ನೀಲಕಂಠ ಶಾಸ್ತ್ರಿಗಳ ವಾದವನ್ನು ಪುರಾವೆ ಸಹಿತ ಕೇವಲ ಕಲ್ಪನೆ ಎಂದು ಇಂಗ್ಲಿಷ್ ಹಾಗೂ ತಮಿಳಿನಲ್ಲಿ ಬರೆದವರು ಇವರು. ‘ಬಿ.ಜಿ.ಎಲ್. ಸ್ವಾಮಿಯವರ ಕ್ಷೇತ್ರ ಸಸ್ಯಶಾಸ್ತ್ರವಾಗಿದ್ದರೂ, ವಿಜ್ಞಾನ ಬೋಧನೆ ಅವರ ವೃತ್ತಿಯಾಗಿದ್ದರೂ, ಅವರೊಬ್ಬ ಗದ್ಯ ಲೇಖಕರಾಗಿದ್ದರೂ, ಅವರಲ್ಲೊಬ್ಬ ಕವಿಯಿದ್ದ‘ ಎನ್ನುವ ಹಾ.ಮಾ. ನಾಯಕರ ಮಾತು ಉತ್ಪ್ರೇಕ್ಷೇಯಲ್ಲ. ಇಂತಹ ಲೇಖಕರ ಬದುಕು-ಬರೆಹದ ಪಕ್ಷಿನೋಟ ನೀಡುವ ಕೃತಿ. ಸಾಹಿತಿ ನಾ. ಸೋಮೇಶ್ವರ ಸಂಪಾದಿಸಿದ್ದಾರೆ. 

About the Author

ಟಿ.ಜಿ. ಶ್ರೀನಿಧಿ

ಟಿ.ಜಿ. ಶ್ರೀನಿಧಿ ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಹಿರಿಯ ಪ್ರೋಗ್ರಾಮರ್ ಅನಲಿಸ್ಟ್ ಆಗಿ ಉದ್ಯೋಗ ಮಾಡುತ್ತಿದ್ಧಾರೆ.  ವಿಜ್ಞಾನ-ತಂತ್ರಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುವುದು ಇವರ  ಅಚ್ಚುಮೆಚ್ಚಿನ ಹವ್ಯಾಸ. ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಕನ್ನಡ ಜಾಲ ತಾಣ 'ಇಜ್ಞಾನ ಡಾಟ್ ಕಾಮ್' (www.ejnana.Com) ನ ರೂವಾರಿ. ನಾಲ್ಕು ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಆರು ಪುಸ್ತಕಗಳು ಈವರೆಗೆ ಪ್ರಕಟವಾಗಿವೆ. ಪ್ರಸ್ತುತ ಉದಯವಾಣಿಯಲ್ಲಿ 'ವಿಜ್ಞಾಪನೆ' ಅಂಕಣ ಪ್ರಕಟವಾಗುತ್ತಿದೆ. ಈ ಹಿಂದೆ ವಿಜಯ ಕರ್ನಾಟಕ, ಉಷಾಕಿರಣ ಹಾಗೂ ಸೂರ್ಯೋದಯ ಪತ್ರಿಕೆಗಳಿಗೆ ಅಂಕಣಕಾರರೂ ಆಗಿದ್ದರು. 'ಶ್ರೀನಿಧಿಯ ಪ್ರಪಂಚದಲ್ಲಿ (WWW.Srinidhi.net.in) ಬ್ಲಾಗಿಸುವುದು, ಛಾಯಾಗ್ರಹಣ, ಪ್ರವಾಸ ಹಾಗೂ ಪುಸ್ತಕಗಳ ಓದು ...

READ MORE

Related Books