ಬಾಳಿನಲ್ಲಿ ಬೆಳಕು

Author : ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ)

Pages 138

₹ 0.00




Year of Publication: 1936
Published by: ಅರವಿಂದ ಗ್ರಂಥಮಾಲೆ
Address: ಹಲಸಂಗಿ, ಜಿಲ್ಲೆ: ವಿಜಯಪುರ.

Synopsys

ಮಹರ್ಷಿ ಟಾಲಸ್ಟಾಯ್ ಆತ್ಮಕಥನ `ಎ ಕನ್ ಫೆಶನ್’ (ಗುಣದೋಷ ಕಥನ) ಪುಸ್ತಕವನ್ನು ಕವಿ ಮಧುರಚೆನ್ನ ಹಾಗೂ ಜನಪದ ಸಾಹಿತಿ ಸಿಂಪೀ ಲಿಂಗಣ್ಣ ಅನುವಾದಿಸಿದ ಕೃತಿ-ಬಾಳಿನಲ್ಲಿ ಬೆಳಕು. ಈ ಪುಸ್ತಕದ ಬೆಲೆ-ಹತ್ತಾಣೆ (00:60 ಪೈಸೆ)

ತನ್ನ ಜೀವನವು ಶುದ್ಧವಾಗುವವರೆಗೆ ಸತ್ಯದರ್ಶನ ವಾಗಲಾರದು ಎಂಬ ಸಂದೇಶವು ಈ ಕೃತಿ ಸಾರುತ್ತಿದ್ದರ ಹಿನ್ನೆಲೆಯಲ್ಲಿ ಕೃತಿಗೆ ‘ಬಾಳಿನಲ್ಲಿ ಬೆಳಕು’ ಎಂದು ಹೆಸರಿಸಲಾಯಿತು ಎಂದು ಅನುವಾದಕರು ಸ್ಪಷ್ಟಪಡಿಸಿದ್ದಾರೆ. ಜೀವನ ವೈಭೋಗದ ಸ್ಥಿತಿಯಿಂದ ವೈರಾಗ್ಯವರೆಗಿನ ಟಾಲಸ್ಟಾಯ್ ಅವರ ಜೀವನ ಪಯಣ ತಮ್ಮ ಮೇಲೆ ಪ್ರಭಾವ ಬೀರಿದ್ದರ ಕಾರಣ ಅವರ ಆತ್ಮಕಥನವನ್ನು ಅನುವಾದಿಸಲು ಪ್ರೇರಣೆ ಯಾಯಿತು ಎಂದು ಹೇಳಿರುವ ಅನುವಾದಕರು, ಆತನ ಜೀವನದ ಸಂಕ್ಷಿಪ್ತ ಚಿತ್ರಣ ನೀಡಿ ಕೃತಿಯನ್ನು ಅನುವಾದಿಸಿದ್ದಾರೆ.

About the Author

ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ)
(31 July 1903 - 15 August 1952)

ಮಧುರ ಚೆನ್ನ ಅವರ ಮೂಲ ಹೆಸರು ಚೆನ್ನಮಲ್ಲಪ್ಪ ಗಲಗಲಿ. 1907ರ ಜುಲೈ 31ರಂದು  ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಸೀಪದ ಹಿರೇಲೋಣಿಯಲ್ಲಿ ಜನಿಸಿದರು. ತಂದೆ ಸಿದ್ಧಲಿಂಗಪ್ಪ, ತಾಯಿ ಅಂಬವ್ವ. ಹಲಸಂಗಿಯಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದ್ದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಮಧುರಚೆನ್ನರು, ಹಲಸಂಗಿ ಗೆಳೆಯರೆಂದೇ ಪ್ರಖ್ಯಾತಿ. ಬಿಜಾಪುರಕ್ಕೆ ಹೋಗಿ ಶ್ರೀ ಕೊಣ್ಣೂರು ಹಣಮಂತರಾಯರಿಂದ ಇಂಗ್ಲಿಷ್, ಸಂಸ್ಕೃತ, ಹಳಗನ್ನಡ ಕಲಿತರು. ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾಷೆಗಳ ಅಭ್ಯಾಸ ಇತ್ಯಾದಿ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಗಳು. 12 ವರ್ಷದ ಬಸಮ್ಮ ಅವರೊಂದಿಗೆ 16 ವರ್ಷದ ...

READ MORE

Related Books