ಬದುಕಿನಲ್ಲಿ ಗೆಲ್ಲುವುದು ಹೇಗೆ

Author : ಉದಯ್ ಕುಮಾರ್ ಹಬ್ಬು

Pages 220

₹ 220.00




Year of Publication: 2021
Published by: ಗಂಗೋತ್ರಿ ಪಬ್ಲಿಷರ್ಸ್
Address: ನಂ.1063/44, 1ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, ವಿದ್ಯಾರಣ್ಯಪುರಂ, ಮೈಸೂರು- 570008
Phone: 8310266796

Synopsys

‘ಬದುಕಿನಲ್ಲಿ ಗೆಲ್ಲುವುದು ಹೇಗೆ’ ಲೇಖಕ ಉದಯಕುಮಾರ ಹಬ್ಬು ಅವರ ಕೃತಿ. ಗೊತ್ತುಗುರಿಯಿಲ್ಲದ ಶಿಕ್ಷಣ ಪದ್ಧತಿ, ಪದವೀಧರ ಯುವಕರಲ್ಲಿಯ ಒಂದು ಆತ್ಮವಿಶ್ವಾಸ ತುಂಬದೆ ನಿಜ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕೊಡದೆ, ಜಡ್ಡುಗಟ್ಟು ಹೋಗುತ್ತಿದೆ, ಪದವಿ ಪಡೆಯುವುದು, ಉದ್ಯೋಗ ಪಡೆಯುವ ಪಾಸ್ ಪೋರ್ಟ್ ಆಗಿದೆ. ಇಂತಹ ಶಿಕ್ಷಣ ಪದ್ಧತಿ ಸ್ವಾವಲಂಬಿಗಳಲ್ಲದ, ಗೊತ್ತುಗುರಿಯಿಲ್ಲದ, ಬೇಜವಾಬ್ದಾರಿ ಯುವಕರನು ಸೃಷ್ಟಿಸುವ ಕಾರ್ಖಾನೆಯಾಗುತ್ತಿದೆ. ಯುವಕರು ನೈತಿಕವಾಗಿ, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಕುಸಿಯುತ್ತಿದ್ದಾರೆ. ಗುರಿಯಿಲ್ಲದ ಶಿಕ್ಷಣ ಆತ್ಮವಿಶ್ವಾಸ ತುಂಬದ ನೀರಸ, ನಿಜಜೀವನಕ್ಕೆ ಯಾವೊಂದು ಸಂಬಂಧವಿಲ್ಲದ ಪಠ್ಯಕ್ರಮಗಳು, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಕುಂಠಿತಗೊಳಿಸುತ್ತಿದೆ. ಈ ಶಿಕ್ಷಣ ಪದ್ಧತಿಯಿಂದ ಯುವಕರು ಮಾನವೀಯ ಮೌಲ್ಯಗಳನ್ನು ಮರೆತು, ಬೌತಿಕವಾದಿಗಳಾಗುತ್ತಿದ್ದಾರೆ. ಸಮಾಜದಲ್ಲಿ ಹೇಗಾದರೂ ಮಾಡಿ ಹಣಮಾಡಿ. ಹಣ ಮಾಡಿದವನಿಗೆ ಮಣೆ ಹಾಕುವುದು ಗುಣವಂತನಿಗಲ್ಲ ಎಂಬ ಹೊಸ ಮೌಲ್ಯವು ಯುವಕರನ್ನು ದಿಕ್ಕುತಪ್ಪಿಸುತ್ತದೆ. ಇಂಥಹ ಅನೇಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಯುವಜನರಿಗೆ ಬದುಕುವ ರೀತಿಯ ಕುರಿತು ತಿಳಿಸಿಕೊಡುವಂತಹ ಮಹತ್ವದ ವಿಚಾರಗಳನ್ನು ಲೇಖಕ ಉದಯಕುಮಾರ ಹಬ್ಬು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books