ಲೇಖಕ ರವೀಂದ್ರ ಭಟ್ ಅವರ ಲೇಖನಗಳ ಸಂಕಲನ ‘ಬದುಕು ಮರದ ಮೇಲೆ’. ಈ ಸಂಕಲನದಲ್ಲಿರುವ ಎಲ್ಲ ಲೇಖನಗಳೂ ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಪತ್ರಿಕೆಗಾಗಿಯೇ ಬರೆದ ಕಾರಣದಿಮದ ಪತ್ರಿಖಾ ಭಾಷೆಯನ್ನೇ ಹೊಂದಿದೆ. ಕೃತಿಯ ಪರಿವಿಡಿಯಲ್ಲಿ ಹಾಡಿಗಳಲ್ಲಿ ಅರಿವಿನ ಹಣತೆ, ಕರೆದರೆ ಬಂದಾನೆಯೇ ಭಗೀರಥ?, ಕಾಲು ಮುರಿದುಕೊಂಡು ಬಿದ್ದ ನ್ಯಾಯ!, ಇದುವರೆಗೂ ಮತ ಚಲಾಯಿಸದವರು!, ಮಾದರಿಯಾದ ಮೊಸರಹಳ್ಳ(ಪರಿಸರ ಸ್ನೇಹಿ ಶೌಚಾಲಯ), ಹೆಡ್ಡನಾದ ಹೆಗ್ಗಡಾಪುರದ ಹುಡುಗ!, ಇಲ್ಲಿ ಕೃಷಿ ಸಾಲವೆಂಬುದು ಗಗನ ಕುಸುಮ!, ಸಾಲಕ್ಕೆ ಪರದಾಡುತ್ತಿರುವ ಈ ನಾಲ್ಕು ಗ್ರಾಮಗಳು.., ಇಲ್ಲಿ ಈಗಲೂ ಕತ್ತೆ ಸಾರಿಗೆ ವ್ಯವಸ್ಥೆ!, ಇಲ್ಲಿ ಕಲ್ಲರಳಿ ಹೂವಾಗದು!, ಶೌಚವೆಂಬ ನಾಕ ನರಕ, ಮೇಲುಕೋಟೆ ನೀರುಕೋಟೆ!, ತ್ರಿಶಂಕು ಶಿವಪುರ, ನೆಲ ಬಿಟ್ಟ ರೈತ, ಬದುಕು, ಚಾಮಲಾಪುರದಲ್ಲಿ ಭಸ್ಮಾಪುರ, ದಡಸೇರದ ದಡದಕಲ್ಲಹಳ್ಳಿ ದಲಿತರು ಸೇರಿದಂತೆ 46 ಶೀರ್ಷಿಕೆಗಳ ಲೇಖನಗಳು ಈ ಸಂಕಲನದಲ್ಲಿದೆ.
ರವೀಂದ್ರ ಭಟ್ಟ ಅವರು ಪ್ರಸ್ತುತ `ಪ್ರಜಾವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕರು. ಅವರ ಊರು ಉತ್ತರ ಕನ್ನಡ ಜಿಲ್ಲೆಯ ಐನಕೈ. ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರ ಬದುಕು ಹಾಗೂ ಬರಹಗಳಲ್ಲಿ ಮಾನವೀಯ ಅಂತಃಕರಣವೇ ಪ್ರಧಾನ. `ಸಂಯುಕ್ತ ಕರ್ನಾಟಕ’ದ ಮೂಲಕ ಪತ್ರಿಕಾರಂಗ ಪ್ರವೇಶಿಸಿದ ಅವರಿಗೆ ಕರ್ನಾಟಕ ಸರ್ಕಾರದ ``ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’’ ಪುರಸ್ಕೃತರು. `ಮೂರನೇ ಕಿವಿ’ ಪುಸ್ತಕ ಅವರ ಐದನೇ ಕೃತಿ. ...
READ MORE