ಬಹುಮುಖ

Author : ಎಲ್.ಜಿ. ಮೀರಾ

Pages 119

₹ 55.00




Year of Publication: 1999
Address: akshara prakashana, heggodu, sagara,karnataka 577417
Phone: 577417

Synopsys

ವಿದ್ವಾಂಸರು, ಸಾಹಿತಿಗಳಾದ ಡಿ.ಆರ್.ನಾಗರಾಜ, ಯು.ಆರ್.ಅನಂತಮೂರ್ತಿ, ಸ್ಟ್ರೀಫನ್ ಗ್ರೀನ್ ಬ್ಲ್ಯಾಟ್‌, ಏಜಾಜ್ ಅಹಮದ್ ಹಾಗೂ ಹರೀಶ್ ತ್ರಿವೇದಿಯವರೊಂದಿಗೆ ವಿಮರ್ಶಕ ಎನ್‌. ಮನು ಚಕ್ರವರ್ತಿ ಅವರು ಇಂಗ್ಲಿಷ್‌ನಲ್ಲಿ ನಡೆಸಿದ ಸಂದರ್ಶನವನ್ನು  ಎಲ್‌.ಜಿ. ಮೀರಾ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಕೃತಿ ’ಬಹುಮುಖ’. ಇದು ವಸಾಹತೋತ್ತರ ಜಗತ್ತಿನೊಂದಿಗೆ ಸಾರಸ್ವತಲೋಕದ ದಿಗ್ಗಜರು ನಡೆಸಿರುವ ಚಿಂತನ ಮಂಥನವೂ ಹೌದು. 

ಸಾರಸ್ವತ ಲೋಕದ ದಿಗ್ಗಜರೊಂದಿಗೆ ನಡೆಸಿದ ಈ ಸಂವಾದ ಒಂದು ಕಾಲಘಟ್ಟಕ್ಕೆ ಹಿಡಿದ ಕನ್ನಡಿಯಂತೆಯೂ ಹೌದು. ಬಡತನದಿಂದ ಬಂಡವಾಳಶಾಹಿತ್ವದವರೆಗೆ, ವಿಕೃತಿಯಿಂದ ಸಂಸ್ಕೃತಿಯವರೆಗೆ ಅನೇಕ ವಿಷಯಗಳು ಈ ಮಾತುಕತೆಯಲ್ಲಿ ಹಾದುಹೋಗಿವೆ. 

ನಾಡಿನ ಅಪರೂಪದ ಚಿಂತಕ ಡಿ. ಆರ್‌. ನಾಗರಾಜ್‌ ಅವರ ನೆನಪಿನಲ್ಲಿ ಅಕ್ಷರ ಪ್ರಕಾಶನ ’ಅಕ್ಷರ ಚಿಂತನ’ ಎಂಬ ಪುಸ್ತಕ ಮಾಲೆಯೊಂದನ್ನು ಪ್ರಕಟಿಸಿತು. ಆ ಮಾಲಿಕೆಯ ಒಂದು ಕೃತಿ ’ಬಹುಮುಖ’. 

About the Author

ಎಲ್.ಜಿ. ಮೀರಾ
(05 May 1971)

ಸ್ತ್ರೀವಾದಿ ಚಿಂತಕಿ, ಲೇಖಕಿ, ಭರತನಾಟ್ಯ ವಿದ್ವತ್ ಎಲ್.ಜಿ.ಮೀರಾ ಕೊಡಗಿನವರು. ತಾಯಿ ಯು.ಕೆ ಚಿತ್ರಾವತಿ, ತಂದೆ ಎಲ್.ಜಿ.ಗುರುರಾಜ್ ಹುಟ್ಟಿದ್ದು 5-5-1971 ರಲ್ಲಿ. ಬಿ.ಎಸ್ಸಿ, ಎಂ.ಎ ಪದವಿ ಪಡೆದ ಇವರು ಪಿ.ಎಚ್ ಡಿಯನ್ನೂ ಪಡೆದವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಭರತನಾಟ್ಯವನ್ನು ಕಲಿಸುವುದು ಇವರ ಹವ್ಯಾಸವಾಗಿದೆ.  ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ...

READ MORE

Related Books