ಬಾಳಿಗೊಂದು ಭಾಷ್ಯ (ಸಂಪುಟ-1)

Author : ಜಿಡ್ಡು ಕೃಷ್ಣಮೂರ್ತಿ

Pages 314

₹ 220.00




Year of Publication: 2015
Published by: ವಸಂತ ಪ್ರಕಾಶನ
Address: # 360, 10ನೇ ಬಿ- ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಎದುರು, 3ನೇ ಬ್ಲಾಕ್, ಜಯನಗರ, ಬೆಂಗಳೂರು-560011
Phone: 080 2244 3996

Synopsys

ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ರಚಿಸಿದ ಕೃತಿ-ಬಾಳಿಗೊಂದು ಭಾಷ್ಯ (ಸಂಪುಟ-1.) ಎಲ್ಲ ಪ್ರಾಣಿ-ಪಕ್ಷಿಗಳಿಗೂ ಬದುಕಿರುತ್ತದೆ. ಆದರೆ, ಮನುಷ್ಯನಿಗೆ ಮಾತ್ರ ಬಾಳು ಇರುತ್ತದೆ. ಹೀಗಾಗಿ, ಆತ ಮೌಲ್ಯವರ್ಧಿತ ಬದುಕನ್ನು ನಡೆಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ತಪ್ಪಿದರೆ, ಪ್ರಾಣಿ-ಪಕ್ಷಿಗಳ ಬದುಕೇ ಈತನಿಗೂ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ, ಜಿಡ್ಡು ಕೃಷ್ಣಮೂರ್ತಿ ಅವರು ಮನುಷ್ಯನ ಬಾಳು ಹೇಗಿರಬೇಕು ಎಂಬುದರ ಸ್ಥೂಲ ಹಾಗೂ ಚಲನಶೀಲ ಚಿತ್ರಣ ನೀಡುತ್ತಾರೆ. ಬಾಳಿನಲ್ಲಿ ಕ್ರಿಯಾಶೀಲತೆ, ಸೃಜನಶೀಲತೆ ಹೇಗಿರಬೇಕು ಎಂಬುದರ ವಿವರಣೆಯನ್ನೂ ನೀಡುತ್ತಾರೆ. ಬಾಳಿಗೊಂದು ಭಾಷ್ಯ ಶೀರ್ಷಿಕೆಯಡಿ ಅವರು ಬರೆದ ಸರಣಿಗಳ ಪೈಕಿ, ಈ ಕೃತಿಯು ಎರಡನೇಯದ್ದಾಗಿದೆ. ಬದುಕಿನ ತತ್ವಜ್ಞಾನ ಕುರಿತು ಹೇಳಿದ್ದರೂ ಭಾಷೆ ಸರಳವಾಗಿದ್ದರಿಂದ, ಆಪ್ತವೆನಿಸಿ, ಬಾಳುವುದು ಎಂದರೆ ಎಷ್ಟೊಂದು ಕಷ್ಟಕರ ಎನಿಸುವಂತಿದೆ. ಮಾತ್ರವಲ್ಲ; ಬಾಳುವುದು ಒಂದು ಕಲೆ ಎಂಬ ಭಾವ ಮೂಡಿಸುತ್ತದೆ.

About the Author

ಜಿಡ್ಡು ಕೃಷ್ಣಮೂರ್ತಿ
(11 May 1895)

ಮೇಧಾವಿ ಜಿಡ್ಡು ಕೃಷ್ಣಮೂರ್ತಿ ಚಿಂತಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಮಾರ್ಗದರ್ಶಿಯಾಗಿ ಇಡೀ ಜಗತ್ತಿನ ಅಸಂಖ್ಯಾತ ಚಿಕಿತ್ಸಕ ಬುದ್ಧಿಜೀವಿಗಳಿಗೆಲ್ಲಾ ಪರಮಗುರು ಎನಿಸಿದ್ದಾರೆ. ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895 ಮೇ 11 ಜನಿಸಿದರು. 1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು. 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರೆನಿಸಿಕೊಂಡರು. ಇದಕ್ಕಾಗಿ ಅವರಿಗೆ ವಹಿಸಿದ್ದ ಸಕಲ ಐಶ್ವರ್ಯ ಸಂಪತ್ತುಗಳನ್ನೂ ಹಿಂದಿರುಗಿಸಿದ ನಂತರ ಮುಂದೆ ಏಕಾಂಗಿಯಾಗಿ ನಡೆದರು. ತಮ್ಮ ...

READ MORE

Related Books