ಬಂಡಾಯ ಸಾಹಿತ್ಯ ಚಳುವಳಿ

Author : ಬರಗೂರು ರಾಮಚಂದ್ರಪ್ಪ

Pages 54

₹ 30.00




Year of Publication: 2018
Published by: ಜನಪ್ರಕಾಶನ
Address: 11ನೇ ಮುಖ್ಯ ರಸ್ತೆ, 14 ಅಡ್ಡ ರಸ್ತೆ, 5ನೇ ಬ್ಲಾಕ್‌, ಜಯನಗರ,ಬೆಂಗಳೂರು 560041
Phone: 9448324727

Synopsys

ಕನ್ನಡ ಸಾರಸ್ವತ ಲೋಕದಲ್ಲಿ ಶೋಷಿತರ ಅಂತರಾಳವನ್ನು ಬರಹ ರೂಪದಲ್ಲಿ ಠಂಕಿಸಿದ ಖ್ಯಾತಿ ಬಂಡಾಯ ಸಾಹಿತ್ಯ ಚಳುವಳಿಯದ್ದು, ಅಂತಹ ಬಂಡಾಯ ಸಾಹಿತ್ಯದ ಬಳುವಳಿಯಲ್ಲಿ ಅನೇಕ ಘಟಾನುಘಟಿ ಸಾಧಕರು ಬಂದು ಹೋಗಿದ್ದಾರೆ, ಪ್ರಸ್ತುತ ಈ ಬಂಡಾಯ ಚಳವಳಿಯ ಹಿರಿತಲೆಯಾದ ಬರಗೂರು ರಾಮಚಂದ್ರಪ್ಪನವರು ಈ ಸಾಹಿತ್ಯ ಚಳವಳಿ ನಡೆದು ಬಂದ ಹಾದಿ, ಎದುರಿಸಿದ ಕ್ಲಿಷ್ಟತೆ, ಮುಂದಿರುವ ಧ್ಯೇಯ, ಇಂದಿನ ಸ್ಥಿತಿಗತಿಯ ಬಗ್ಗೆ ವಿಮರ್ಷಾತ್ಮಕವಾಗಿ ಬರೆದು ಮಾಹಿತಿ ಒದಗಿಸಿದ್ದಾರೆ.

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Related Books