ಬಂಗಾರದ ಮನುಷ್ಯ ಸಿದ್ದಲಿಂಗಯ್ಯ

Author : ಶಶಿಧರ ಚಿತ್ರದುರ್ಗ

Pages 200

₹ 200.00




Year of Publication: 2016
Published by: ಸಿನಿಮಾ ಸಾಹಿತ್ಯ ಪ್ರಕಾಶನ

Synopsys

ಕನ್ನಡ ಚಿತ್ರರಂಗ ಕಂಡ ಮೇರು ನಿರ್ದೇಶಕ ಸಿದ್ದಲಿಂಗಯ್ಯ ಅವರ ಸಿನಿಮಾ, ಬದುಕು, ಸಾಧನೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಹೊತ್ತಿಗೆ. ಇದು ಸಿದ್ದಲಿಂಗಯ್ಯ ಅವರ ಕುರಿತಾಗಿ ಇರುವ ಏಕೈಕ ಕೃತಿಯೂ ಹೌದು. ಈ ಸಂಪಾದಿತ ಕೃತಿಯಲ್ಲಿ ಸಿದ್ದಲಿಂಗಯ್ಯನವರ ಚಿತ್ರಗಳು ಮತ್ತು ಅವರ ಸಿನಿಮಾಗಳಲ್ಲಿನ ಸಂಗೀತ, ಸಾಹಿತ್ಯ ಕುರಿತಂತೆ ಪರಿಣಿತರ ಬರಹಗಳಿವೆ. ಸಿದ್ದಲಿಂಗಯ್ಯನವರ ಗರಡಿಯಲ್ಲಿ ತಯಾರಾದ ಕಲಾವಿದರು ಹಾಗೂ ತಂತ್ರಜ್ಞರ ಅಭಿಪ್ರಾಯಗಳು, ಅವರ ನಿರ್ದೇಶನದ ಚಿತ್ರಗಳ ಪರಿಚಯ ಲೇಖನಗಳಿವೆ. ಪುಸ್ತಕದಲ್ಲಿ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ನೂರಾರು ಅಪರೂಪದ ಫೋಟೋಗಳು ಬಳಕೆಯಾಗಿವೆ.

About the Author

ಶಶಿಧರ ಚಿತ್ರದುರ್ಗ
(11 August 1979)

ಊರು ಕೋಟೆ ನಾಡು ಚಿತ್ರದುರ್ಗ. ಶಾಲೆ- ಕಾಲೇಜು ಓದಿದ್ದು ಚಿತ್ರದುರ್ಗದಲ್ಲಿ. ದುರ್ಗದ 'ಸುದ್ದಿಗಿಡುಗ' ಜಿಲ್ಲಾ ಪತ್ರಿಕೆಯಲ್ಲಿ ಪತ್ರಿಕೋದ್ಯಮ ಶುರುವಾಯ್ತು. ಮುಂದೆ 'ಕನ್ನಡ ಪ್ರಭ' ಪತ್ರಿಕೆ ಸೇರಿದಾಗ ಸಿನಿಮಾ ಪತ್ರಿಕೋದ್ಯಮದ ನಂಟು ಸಿಕ್ಕಿತು. ನಂತರ 'ಟೈಮ್ಸ್ ಆಫ್ ಇಂಡಿಯಾ' ಬಳಗದ 'ವಿಜಯ ನೆಕ್ಸ್ಟ್', 'ವಿಜಯ ಕರ್ನಾಟಕ'ದಲ್ಲಿ ಕಾರ್ಯನಿರ್ವಹಣೆ. 'ದಿ ಸ್ಟೇಟ್' ನೊಂದಿಗೆ ಡಿಜಿಟಲ್ ಪತ್ರಿಕೋದ್ಯಮ ಪರಿಚಯ. ಪ್ರಸ್ತುತ ಫ್ರೀಲಾನ್ಸರ್. ಇಲ್ಲಿಯವರೆಗೆ ಎಂಟು ಪುಸ್ತಕಗಳು ಪ್ರಕಟವಾಗಿವೆ. ಇವುಗಳ ಪೈಕಿ ಏಳು ಸಿನೆಮಾಗೆ ಸಂಬಂಧಿಸಿದ ಕೃತಿಗಳು. ವೃತ್ತಿಯಲ್ಲಿ ಸಿನಿಮಾ ಪತ್ರಕರ್ತ. ವಿವಿಧ ಪತ್ರಿಕೆ, ಪೋರ್ಟಲ್‌ಗಳಲ್ಲಿ ಹದಿನೈದು ವರ್ಷಗಳ ಅನುಭವ. ಸಿನಿಮಾ ವೀಕ್ಷಣೆ, ಫೋಟೋಗ್ರಫಿ ...

READ MORE

Related Books