ಬಂಗಾರದ ಮನುಷ್ಯರು (ಕೆಜಿಎಫ್‌... ಕನ್ನಡಿಗರ ಚಿನ್ನದ ಟೈಟಾನಿಕ್)

Author : ಆರ್‌. ಕೇಶವಮೂರ್ತಿ

Pages 144

₹ 150.00




Year of Publication: 2019
Published by: ಆಕೃತಿ ಪ್ರಕಾಶನ
Address: #31/1, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು

Synopsys

ಗಣಿನಾಡು ಕೆಜೆಎಫ್‌ ಬಾಹ್ಯ ಚಿತ್ರಣ ಈಗಾಗಲೇ ಎಲ್ಲರಿಗೂ ಪರಿಚಿತವಾಗಿದೆ. ಆದರೆ ಕೆಜೆಎಫ್‌ನ ಆಂತರಿಕ ಚಿತ್ರಣದ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕಿದೆ. ಲೇಖಕ ಆರ್. ಕೇಶವಮೂರ್ತಿ ಅವರು ಚಿನ್ನದ ಗಣಿ ಕೆಜೆಎಫ್‌ನ ನೈಜ ಚಿತ್ರಣವನ್ನು ಓದುಗರಿಗೆ ಬಂಗಾರದ ಮನುಷ್ಯರು ಪುಸ್ತಕರ ಮೂಲಕ ನೀಡಿದ್ದಾರೆ. ಗಣಿ ಕಾರ್ಮಿಕರ ಬದುಕು, ಕಷ್ಟ, ಕಾಪರ್ಣ್ಯಗಳ ಬಗ್ಗೆ ವಿವರಿಸಿದ್ದಾರೆ. ದೂರದಿಂದ ಸುಂದರವಾಗಿ ಕಾಣಿಸುವ ಊರುಗಳಿಗೆ ಕ್ರೂರ ಮುಖವು ಇರುತ್ತದೆ. ಗಣಿಯಿಂದ ತೆಗೆದು ಸೋಸಿ ಸುಟ್ಟಿದ್ದು ಚಿನ್ನವನ್ನಷ್ಟೆ ಅಲ್ಲ, ಬದುಕನ್ನು ಕೂಡ. ಹಾಗೆ ಸುಡಿಸಿಕೊಂಡವರ ಆತ್ಮಕತೆ ಇದು ಎನ್ನುವ ಜೋಗಿಯವರ ಮಾತಿನ ಆಂತರ್ಯವನ್ನು ಈ ಕೃತಿ ವಿವರಿಸುತ್ತದೆ.

About the Author

ಆರ್‌. ಕೇಶವಮೂರ್ತಿ

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಪುಲಿಪಾಪೇನಹಳ್ಳಿಯವರಾದ ಕೇಶವ ಮೂರ್ತಿ ಅವರು ಕೋಲಾರದಲ್ಲಿ ಹಾಗೂ  ಶಿವಮೊಗ್ಗದಲ್ಲಿ ಶಿಕ್ಷಣ ಪಡೆದರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಇವರು ನಮ್ಮನಾಡು, ಕ್ರಾಂತಿದೀಪ, ಜನಹೋರಾಟ, ಈಟಿವಿ, ಉದಯವಾಣಿ ಪತ್ರಿಕೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕನ್ನಡ ಪ್ರಭಾ ದಿನಪತ್ರಿಕೆಯ ಸಿನಿಮಾ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.   ಗಾಂಧಿ ಸೀಟು, ಕಲಾಭಿಮಾನಿ ಬಾಲಣ್ಣ ಹಾಗೂ ಗೇಟ್ ಕೀಪರ್ ಇವರು ಬರೆದ ಪ್ರಮುಖ ಕೃತಿಗಳು.  ...

READ MORE

Related Books