ಬರೆಹದಲ್ಲಿ ಬೇಂದ್ರೆ ಬದುಕು

Author : ಜಿ. ಕೃಷ್ಣಪ್ಪ

Pages 358

₹ 100.00




Year of Publication: 2008
Published by: ಪ್ರಸಾರಾಂಗ, ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌
Address: ಸಾಧನಕೇರಿ, ಧಾರವಾಡ-8

Synopsys

ಬೇಂದ್ರೆಯವರ ಕಾವ್ಯದಂತೆ ಅವರ ಬದುಕು ಕೂಡ ಅಭ್ಯಾಸಯೋಗ್ಯವಾದದ್ದು. ಯಾಕೆಂದರೆ, ಅವರ ಬದುಕಿಗೂ ಕಾವ್ಯಕ್ಕೂ ಅನ್ನೋನ್ಯವಾದ ಸಂಬಂಧವಿದೆ. ಅವರ ಎಷ್ಟೋ ಕವಿತೆಗಳಲ್ಲಿ ಅವರ ಬದುಕಿನ ಪಾಡೇ ಹಾಡಾಗಿ ಅಭಿವ್ಯಕ್ತಿ ಪಡೆದಿದೆ. ಅಂತೆಯೇ ಅವರ ಕವಿತೆಗಳನ್ನು ಅರ್ಥಮಾಡಿಕೊಳ್ಳಲಿಕ್ಕೆ ಅವುಗಳ “ಭಾವಸಂದರ್ಭ'ದಂತೆ ಜೀವನ ಸಂದರ್ಭದ ಸಹಾಯವೂ ಬೇಕಾಗುತ್ತದೆ.

ಬೇಂದ್ರೆಯವರ ಬದುಕು-ಬರಹಗಳ ವಿಶೇಷ ಅಧ್ಯಯನದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಡಾ.ಜಿ.ಕೃಷ್ಣಪ್ಪ ಅವರು ಈ ಹೊತ್ತಿಗೆಯಲ್ಲಿ ಬೇಂದ್ರೆಯವರ ಬದುಕನ್ನು ಅವರ ಗದ್ಯ ಹಾಗೂ ಕಾವ್ಯದ ಮೂಲಕ ಪುನರಚಿಸುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ, ಅವರ ಬದುಕಿನ ಮಹತ್ವದ ಸಂದರ್ಭಗಳ ಸಹಾಯದಿಂದ ಅವರ ಕಾವ್ಯವನ್ನು ಅರ್ಥೈಸುವ ಪ್ರಯತ್ನವನ್ನು ಮಾಡಿದ್ದಾರೆ. ಈ ಇಮ್ಮುಖದ ಅಭ್ಯಾಸದಿಂದ ಬೇಂದ್ರೆಯವರ ಜೀವನ ಮತ್ತು ಕಾವ್ಯ ಎರಡೂ ಹೊಸ ಬೆಳಕಿನಲ್ಲಿ ಕಾಣಿಸಿಕೊಂಡಿದೆ.

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books