ಬರ್ಲಿನ್ ಬಂದಿತು ಗಂಗೆಯ ತಡೆಗೆ

Author : ಗೌರೀಶ ಕಾಯ್ಕಿಣಿ

Pages 234

₹ 8.00




Year of Publication: 1974
Published by: ಸುಬೋಧ ಸಾಹಿತ್ಯ
Address: ಮಂಗಳವಾರಪೇಟೆ, ಧಾರವಾಡ

Synopsys

‘ಬರ್ಲಿನ್ ಬಂದಿತು ಗಂಗೆಯ ತಡೆಗೆ’ ಭಾ.ದ. ಖೇರ ಅವರ ಕೃತಿಯ ಕನ್ನಡಾನುವಾದ. ಖ್ಯಾತ ಲೇಖಕ ಗೌರೀಶ ಕಾಯ್ಕಿಣಿ ಅವರು ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಹೈಡೆಲ್ ಬರ್ಗ್ ಇದು ಜರ್ಮನಿಯಲ್ಲಿ ಒಂದು ಪ್ರಸಿದ್ಧ ನಗರ, ಆ ಸ್ಥಳದಲ್ಲಿ ಈ ಕರುಣರಮ್ಮ ಕಥೆ ನಡೆಯಿತು. ಜರ್ಮನಿಯೊಳಗಿನ ಆ ನಗರಗಳನ್ನೂ ನಾನು ಕಣ್ಣಾರೆ ಕಂಡೆನು. ಯಾವ ಯಾವ ಸ್ಥಳಗಳಲ್ಲಿ ಈ ಕಾದಂಬರಿಯು ಘಟಿಸಿತೋ ಆಯಾ ಸ್ಥಳಗಳ ಛಾಯಾ ಚಿತ್ರವನ್ನು ನನ್ನ ಅಂತಃಕರಣದಲ್ಲಿ ಕೊರೆದಿಟ್ಟುಕೊಂಡೆ. ಭಾರತಕ್ಕೆ ಹಿಂದಿರುಗಿದ ಮೇಲೆ ಈ ಕಾದಂಬರಿ ಹೊಸತಾಗಿ ಆಕಾರ ತಾಳಿತು. ಸುಮಾರು 12 ವರ್ಷಗಳ ಹಿಂದೆ ಕೌಶಿಕರು ಕೇಸರಿಯಲ್ಲಿ ಬರೆದ ಉತ್ಕೃಷ್ಟ ಕಥೆಯನ್ನು ಓದಿದ್ದೆ, ಅಂದಿನಿಂದಲೂ ಈ ಕಾದಂಬರಿಯ ಕಲ್ಪನೆ ನನ್ನ ಮನಸ್ಸಿನಲ್ಲಿ ರೂಪಗೊಳ್ಳುತ್ತಿತ್ತು. ಈಗೇನು, ಆ ಕಾದಂಬರಿಯೊಳಗಿನ ಘಟನಾಸ್ಥಳಗಳನ್ನೂ ನಾನು ಪ್ರತ್ಯಕ್ಷ ಕಂಡೆನು. ಮತ್ತು ಈ ಚಕ್ಷುರ್ವೈ ಸತ್ಯಂ ಕಾದಂಬರಿ ಪ್ರತ್ಯಕ್ಷದಲ್ಲಿ ಅವತರಿಸಿತು. ಈ ಕಥೆ ನಿಜವಾಗಿಯೂ ಸತ್ಯ ಸೃಷ್ಟಿಯಲ್ಲಿ ನಡೆದಿರಬಹುದೇ ಕಪೋಲ-ಕಲ್ಪಿತ ಕಥೆಗಳಿಗಿಂತ ಸತ್ಯದ ಅನೇಕ ವೇಳೆ ಹೆಚ್ಚು ಅದ್ಭುತವಿರುತ್ತದೆ. ಪ್ರಸ್ತುತ ಕಾದಂಬರಿಯ ಕುರಿತು ಇಷ್ಟೊಂದು ನೆನಪಿನಲ್ಲಿ ಇಟ್ಟುಕೊಂಡರೂ ಸಾಕು ಎಂದಿದ್ದಾರೆ ಗೌರೀಶ ಕಾಯ್ಕಿಣಿ.

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books