ಬಸವ ಪುರಾಣ ಸಂಗ್ರಹ

Author : ಪಿ. ವಿ. ನಾರಾಯಣ

Pages 112

₹ 4.00




Year of Publication: 1974
Published by: ಪ್ರಿಯದರ್ಶಿನಿ ಪ್ರಕಾಶನ
Address: ನಂ. 138, 7ನೇ ಸಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು- 560104

Synopsys

ಬಸವ ಪುರಾಣ ಸಂಗ್ರಹ ಪಿ.ವಿ ನಾರಾಯಣ ಅವರ ಸಂಪಾದಕತ್ವದ ಕೃತಿಯಾಗಿದೆ. “ಬಸವ ಪುರಾಣ'ವನ್ನು ಬರೆದವನು ಭೀಮಕವಿ, ಇವನ ತಂದೆ ಶಿವ ಕವಿದೇವ, ಶಿವಕವಿದೇವನು ಆಂಧ್ರಭಾಷಾಸತ್ಯ ವಿಶ್ವಕೋವಿದ' ನಾಗಿದ್ದ ವನು. ಇವನೊಮ್ಮೆ ಪಂಪಾಪುರಕ್ಕೆ ಬಂದು ಹರಿಹರನನ್ನು ಕಂಡು ನಮಸ್ಕರಿಸಿ 'ನನಗೆ ಸತ್ಪುತ್ರನೊಬ್ಬನು ಹುಟ್ಟಿದರೆ ನಿಮ್ಮ ಪಾದಸೇವೆಯನ್ನು ಮಾಡು ತ್ತಿರುವ ರಾಘವಾಂಕನ ಸೇವೆ ಮಾಡಿಸಿ ಓದಿಸುತ್ತೇನೆ' ಎಂದು ಹೇಳುತ್ತಾನೆ. ಮುಂದೆ ಅವನಿಗೆ ಗಂಡುಮಗುವಾದಾಗ ಅದಕ್ಕೆ ಭೀಮನೆಂದು ಹೆಸರಿಡುತ್ತಾನೆ. ಆ ಮಗು ಬೆಳೆದ ಮೇಲೆ ಹರಿಹರನಿಗೆ ಒಪ್ಪಿಸಿದಾಗ ಅವನಿಗೆ ವಿದ್ಯೆ ಕಲಿಸ ಬೇಕೆಂದು ಹರಿಹರನು ರಾಘವಾಂಕನಿಗೆ ಹೇಳುತ್ತಾನೆ. ವಿದ್ಯೆಯನ್ನು ಕಲಿತಾದಮೇಲೆ ಕವಿತೆಯನ್ನು ಹೇಳೆಂದು ಹರಿಹರನು ಕೇಳಿದಾಗ ಭೀಮನು 'ಶೃಂಗಿದಂಡಕ'ವನ್ನು ಹೇಳಿದನು. ವಿಷಯವು ಚಿಕ್ಕನಂಜೇಶನ `ರಾಘವಾಂಕಚಾರಿತ್ರ' ದಲ್ಲಿ ಭೀಮಕವಿಯ ಬಗ್ಗೆ ದೊರೆಯುತ್ತದೆ. ಎಂದರೆ ಭೀಮಕವಿಯು ಹರಿಹರ-ರಾಘವಾಂಕರ ಮೇಲ್ವಿಚಾರಣೆಯಲ್ಲಿ ಬೆಳೆದವನೆಂದು ತಿಳಿಯುತ್ತದೆ. ಈತನು ರಾಘವಾಂಕನ ಷಟ್ನದೀ ಪರಂಪರೆಯನ್ನು ಮುಂದುವರಿಸಿರುವುದಕ್ಕೆ ಇದೂ ಕಾರಣವಿರಬಹುದು ಎಂದು ಕೃತಿಯ ಬಗ್ಗೆ ಪಿ.ವಿ ನಾರಾಯಣ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books