ಬಸವಣ್ಣ ಮತ್ತು ಇತರ ದಾರ್ಶನಿಕರು

Author : ಉದಯ್ ಕುಮಾರ್ ಹಬ್ಬು

Pages 204

₹ 210.00




Year of Publication: 2021
Published by: ಗಂಗೋತ್ರಿ ಪಬ್ಲಿಷರ್ಸ್
Address: ನಂ.1063/44, 1ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, ವಿದ್ಯಾರಣ್ಯಪುರಂ, ಮೈಸೂರು- 570008
Phone: 8310266796

Synopsys

‘ಬಸವಣ್ಣ ಮತ್ತು ಇತರ ದಾರ್ಶನಿಕರು’ ಲೇಖಕ ಉದಯಕುಮಾರ ಹಬ್ಬು ಅವರು ಶರಣ ಪರಂಪರೆಯ ಕುರಿತು ಬರೆದ ಕೃತಿ. 12ನೇ ಶತಮಾನದಲ್ಲಿ ಕರ್ನಾಟಕದ ಬಸವನ ಬಾಗೇವಾಡಿಯಲ್ಲಿ ಬಿಜ್ಜಳನು ಅರಸನಾಗಿರುವ ಕಾಲದಲ್ಲಿ ಬಸವಣ್ಣನ ನೇತೃತ್ವದಲ್ಲಿ ಒಂದು ಮಹಾನ್ ಸಾಮಾಜಿಕ, ಧಾರ್ಮಿಕ ಕ್ರಾಂತಿಯಾಯಿತು. ಶೂದ್ರಾತಿಶೂದ್ರರು, ಅಸ್ಪೃಶ್ಯರು ಮೇಲ್ವರ್ಗದ ಶೋಷಣೆಗೆ ತುಳಿತಕ್ಕೆ ಒಳಗಾಗಿದ್ದರು. ಅವರ ಬದುಕು ಹೀನಾಯವಾಗಿತ್ತು. ಇದನ್ನು ಕಂಡ ಬಸವಣ್ಣನ ಹೃದಯ ವಿಲಿವಿಲಿ ಒದ್ದಾಡಿತು. ಈ ಕೆಳವರ್ಗದ ಜನರನ್ನು ಮೇಲೆತ್ತುವುದು ಹೇಗೆ, ಅವರಿಗೆ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಭಾಗ್ಯವನ್ನು ಕಲ್ಪಿಸುವುದು ಹೇಗೆ ಎಂದು ಹಗಲಿರುಳು ಚಿಂತನೆ ನಡೆಸಿದ. ವೇದಗಳನ್ನು ಉಪನಿಷತ್ತುಗಳನ್ನು ಅಧ್ಯಯನ ಮಾಡಿದ. ಆ ಯಾವ ಪವಿತ್ರ ಗ್ರಂಥಗಳಲ್ಲೂ ಜಾತಿ ತಾರತಮ್ಯತೆಯ ಪ್ರಸ್ತಾಪವಿರಲಿಲ್ಲ. ಚತುವರ್ಣಗಳು ಅವನವನ ಗುಣ ಮತ್ತು ಕರ್ಮಗಳಿಂದಲೆ ಹೊರತು ಹುಟ್ಟಿನಿಂದಲ್ಲ ಎಂದು ಅರಿತ. ಈ ಮೇಲು ಕೀಳನ್ನು ಈ ತಾರತಮ್ಯತೆಯನ್ನು ಮಾಡಿದವರು ತಮ್ಮ ಸ್ವಾರ್ಥ ಮತ್ತು ಲಾಭಕ್ಕಾಗಿ ಮಾಡಿಕೊಂಡ ಹುನ್ನಾರ ಎಂದು ಅರಿತ. ಅದಕ್ಕಾಗಿ ಎಲ್ಲರಿಗೂ ಯಾವ ಜಾತಿ ತಾರತಮ್ಯವಿಲ್ಲದೆ ಮೇಲು-ಕೀಳು, ಸ್ತ್ರೀ ಪುರುಷ ಈ ಯಾವ ಭೇದಗಳನ್ನು ಮಾಡದೆ ಲಿಂಗಧಾರಣೆಯನ್ನು ಮಾಡಿ ಕರಸ್ಥಲ ಲಿಂಗಪೂಜೆಯ ಅನುಷ್ಠಾನವನ್ನು ಪರಿಚಯಿಸಿದ ಹಾಗಾಗಿ ಬಸವಣ್ಣ ಮತ್ತು ಇತರೆ ಶರಣರ ಕುರಿತು ಉದಯಕುಮಾರ ಹಬ್ಬು ಈ ಕೃತಿಯಲ್ಲಿ ಬರೆದಿದ್ದಾರೆ.

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books