ಬಸವೇಶ್ವರ-ಜ್ಞಾನೇಶ್ವರ

Author : ಚಂದ್ರಕಾಂತ ಪೋಕಳೆ

Pages 56

₹ 15.00




Year of Publication: 1998
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560001

Synopsys

ಕರ್ನಾಟಕದ ಬಸವೇಶ್ವರ ಹಾಗೂ ಮಹಾರಾಷ್ಟ್ರದ ಜ್ಞಾನೇಶ್ವರ ಸಮಕಾಲೀನರಲ್ಲ. ಆದರೂ ಅವರು ಬದುಕಿದ್ದಾಗ ಸಮಾಜದ ಪರಿವರ್ತನೆ ಅವರಿಬ್ಬರ ಗುರಿಯೂ ಆಗಿತ್ತು. ಅವರು ಪ್ರಚಾರಗೊಳಿಸಿದ ವಿಚಾರಗಳು ಅಂದಿಗೂ-ಇಂದಿಗೂ ಪ್ರಸ್ತುತವಾಗಿವೆ. ಅವರು ಜನರ ಆಡುಮಾತಿನಲ್ಲಿ ತಮ್ಮ ವಚನಗಳು ಹಾಗೂ ಆಭಂಗಗಳನ್ನು ರಚಿಸಿ ಜನಸಾಮಾನ್ಯರಿಗೆ ಸಮೀಪರಾದರು. ಕಾಗದ ಮತ್ತು ಮುದ್ರಣ ಸೌಲಭ್ಯಗಳಿಲ್ಲದಿದ್ದ ಆ ಕಾಲದಲ್ಲಿ ಅವರ ಅನುಯಾಯಿಗಳು ಆ ವಿಚಾರಗಳನ್ನು ಕಂಠಪಾಠ ಮಾಡಿ, ಮುಂದಿನ ತಲೆಮಾರಿನವರಿಗಾಗಿ ರಕ್ಷಿಸಿದರು, ತಾಳೆಯೋಲೆಯ ಗ್ರಂಥಗಳು ಬೆಂಕಿಗೆ ಆಹುತಿಯಾದರೂ ಜನರ ಎದೆಯಲ್ಲಿ ಅವು ಉಳಿದುಕೊಂಡವು. ಈ ಪುಟ್ಟ ಹೊತ್ತಿಗೆಯಲ್ಲಿ ಲೇಖಕ ಶ್ರೀಕೃಷ್ಣ ಮೆಣಸೆ ಅವರು ಬಸವೇಶ್ವರ ಮತ್ತು ಜ್ಞಾನೇಶ್ವರರ ಬದುಕಿನ ವಿಚಾರಗಳ ಒಂದು ತುಲನಾತ್ಮಕ ಅಧ್ಯಯನ ಮಾಡಿದ್ದಾರೆ. ಮರಾಠಿಯಲ್ಲಿ ಪ್ರಕಟವಾಗಿರುವ ಈ ಕೃತಿ ಪ್ರಶಸ್ತಿಗಳನ್ನು ಗಳಿಸಿದೆ. ಚಂದ್ರಕಾಂತ ಪೋಕಳೆ ಅವರು ಆ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books