ಬೆಳಕಿನ ಮಾಂತ್ರಿಕ ವಿ.ಕೆ.ಮೂರ್ತಿ

Author : ಎನ್.ಎಸ್. ಶ್ರೀಧರಮೂರ್ತಿ

Pages 70

₹ 60.00




Year of Publication: 2014
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಕನ್ನಡಿಗ ವಿ.ಕೆ.ಮೂರ್ತಿ, 20ನೇ ಶತಮಾನದಲ್ಲಿ ನೆರಳು ಬೆಳಕಿನ ಛಾಯಾಗ್ರಹಣಕ್ಕೆ ಹೊಸ ಭಾಷ್ಯ ಬರೆದವರು. ’ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಪಡೆದ ಮೊದಲ ಛಾಯಾಗ್ರಾಹಕರು. ಡಾ.ರಾಜ್‌ಕುಮಾರ್‌ ನಂತರ ಕನ್ನಡ್ಕೆ ಫಾಲ್ಕೆ ಪ್ರಶಸ್ತಿ ತಂದುಕೊಟ್ಟ ಮಹಾನ್ ಪ್ರತಿಭೆ.  ಛಾಯಾಗ್ರಹಣದಂತಹ ತಾಂತ್ರಿಕ ಕೌಶಲ್ಯವನ್ನು ಕಲೆಯ ಮಟ್ಟಕ್ಕೆ ಏರಿಸಿದವರು. ‘ಪ್ಯಾಸಾ’ ಸಿನಿಮಾದ ‘ವಖ್ತ ನೆ ಕಿಯಾ ಕ್ಯಾ ಸಿತಮ್’ ಹಾಡಿನಲ್ಲಿ ಮೂಡಿಸಿದ ‘ಬೆಳಕಿನ ಕೋಲು’ ದೃಶ್ಯ ಬೆಳ್ಳಿತೆರೆಯ ಇತಿಹಾಸದಲ್ಲೇ ಹೊಸತರವನ್ನು ಮೂಡಿಸಿತು. ಈ ದೃಶ್ಯ,  ಸಿನಿಮಾ ಜಗತ್ತಿನ ಛಾಯಾಗ್ರಹಣ ವಿದ್ಯಾರ್ಥಿಗಳಿಗೆಲ್ಲಾ ಇವತ್ತಿಗೂ ಒಂದು ಪಠ್ಯವಾಗಿ ಪರಿಣಮಿಸಿದೆ. ಈ ದೃಶ್ಯಕ್ಕಾಗಿ 1959ರಲ್ಲಿ ಉತ್ತಮ ಛಾಯಾಗ್ರಹಣಕ್ಕಾಗಿ ‘ಫಿಲ್ಮ್ ಫೇರ್’ ಪ್ರಶಸ್ತಿ ಪಡೆದರು. ಹಿಂದಿ ಸಿನಿಮಾ ದಿಗ್ಗಜ ಗುರುದತ್‌ ಅವರ ಸಿನಿಮಾಗಳಿಗೆಲ್ಲಾ ಕಾಯಂ ಛಾಯಾಗ್ರಾಹಕರಾದ ಇವರು ಗುರುದತ್‌ನ ಕಣ್ಣುಗಳು ಎಂದು ಭಾರತೀಯ ಸಿನಿಮಾ ಲೋಕದಲ್ಲಿ ಹೆಸರು ಪಡೆದಿದ್ದರು. 

ಎನ್ ಎಸ್ ಶ್ರೀಧರಮೂರ್ತಿ ಅವರು ಕೃತಿ ಮೂಲಕ ಛಾಯಾಗ್ರಹಣ ಮಾಂತ್ರಿಕನನ್ನು ಪರಿಚಯಿಸಿದ್ದಾರೆ. 

About the Author

ಎನ್.ಎಸ್. ಶ್ರೀಧರಮೂರ್ತಿ
(24 August 1968)

ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು  'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ...

READ MORE

Related Books