ಬೇಲಿ

Author : ಅಕ್ಷತಾರಾಜ್ ಪೆರ್ಲ

Pages 117

₹ 180.00




Year of Publication: 2021
Published by: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ
Address: ಮಂಗಳೂರು ವಿಶ್ವವಿದ್ಯಾನಿಲಯ

Synopsys

ಕುಡ್ಲ ತುಳುಕೂಟ ನಡೆಸುವ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ತುಳುನಾಟಕ ಹಸ್ತಪ್ರತಿ ಸ್ಪರ್ಧೆಯಲ್ಲಿ ಸತತವಾಗಿ 44 ಮತ್ತು 45 ನೇ ವರ್ಷ ಪ್ರಥಮ ಸ್ಥಾನ ಪಡೆದ ಎರಡು ನಾಟಕಗಳಾಗಿದ್ದು ಬೇಲಿ ಸಾಮಾಜಿಕ ನಾಟಕ ಹಾಗೂ ಸಾಪೊದ ಕಣ್ಣ್ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವಂತಹದ್ದು. 'ಬೇಲಿ' ನಾಟಕ ಅಕ್ರಮ ಭೂ ಕಬಳಿಕೆಯ ವಿರುದ್ಧ ಧ್ವನಿಯೆತ್ತುವ ಬಡ ಕುಟುಂಬದ ಸಂಕಟ ಮತ್ತು ಪೇಟೆಯ ಗುಂಗಿನಲ್ಲಿರುವ ಯುವಕನ ಹೋಮ್ ಸ್ಟೇ ಹುಚ್ಚಿನ ಸುತ್ತ ರಚಯಿತವಾಗಿದೆ. 'ಸಾಪೊದ ಕಣ್ಣ್' ಮಹಾಭಾರತದ ಶಿಖಂಡಿಯನ್ನಾಧರಿಸಿ ಬರೆದಿದ್ದು ಶಿಖಂಡಿಗೆ ಕಳೆದ ಜನ್ಮದ ನೆನಪಾದರೆ ಆತ ಭೀಷ್ಮನೆದುರು ಹೇಗೆ ನಿಲ್ಲಬಲ್ಲನೆಂಬುದು ನಾಟಕದ ತಿರುಳಾಗಿದ್ದು ಪ್ರಸ್ತುತ ಮಂಗಳಮುಖಿಯರ ಸ್ಥಾನಮಾನವನ್ನು ಶಿಖಂಡಿಯ ಮಾತಿನೊಡನೆ ಸಮೀಕರಿಸುತ್ತಾ ಸಾಗುತ್ತದೆ. ತುಳುವಿನಲ್ಲಿ ಮಂಗಳಮುಖಿಯರ ಬದುಕನ್ನಾಧರಿಸಿ ಬರೆದ ಮೊದಲ ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾದ ನಾಟಕ ತೃತೀಯ ಲಿಂಗಿಗಳನ್ನು ಸಮಾಜದಲ್ಲಿ ಕಾಣುವ ರೀತಿಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

About the Author

ಅಕ್ಷತಾರಾಜ್ ಪೆರ್ಲ
(17 August 1990)

ಅಕ್ಷತಾರಾಜ್ ಪೆರ್ಲ ಅವರ ಕಾವ್ಯ ನಾಮ ಅಕ್ಷರ. ಇವರ ತಂದೆ ವೆಂಕಟೇಶ್ ಭಾಗ್ವತ್ ಹಾಗೂ ತಾಯಿ ರಾಜೇಶ್ವರಿ.ಹುಟ್ಟೂರು ಮೂಡಬಿದ್ರೆಯಾದರೂ, ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ವಾಸವಾಗಿದ್ದಾರೆ. ಸಾಹಿತ್ಯದಲ್ಲಿ ಪದವಿ ಹಾಗೂ ಹಿಂದಿ ಪ್ರವೀಣ ಪಡೆದಿರುವ ಇವರು ಕತೆ, ಕವಿತೆ, ನಾಟಕ, ಕಾದಂಬರಿ, ವೈಚಾರಿಕ ಲೇಖನ ಸೇರಿದಮತೆ ಅನೇಕ ಸಾಹಿತ್ಯ ಕೃಷಿಯನ್ನು ಮಾಡಿದವರು. ಕನ್ನಡ, ತುಳು, ಹವ್ಯಕ, ಅರೆಭಾಷೆ, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಬಲ್ಲ ಇವರು, ಮಂಗಳೂರು ಆಕಾಶವಾಣಿಯಲ್ಲಿ ನಿರೂಪಕಿಯಾಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : ಸಂಚಿಯೊಳಗಿನ ಸಂಜೆಗಳು - ಕನ್ನಡ ಕವಿತೆ ಸಂಕಲನ, ಕಂದೀಲು - ಕನ್ನಡ ಕತಾ ಸಂಕಲನ,ಬೊಳ್ಳಿ ...

READ MORE

Related Books