ಬೆಳ್ಳಿ ಕಪ್ಪಾಗುವುದು ಏಕೆ ?

Author : ಎ.ಓ. ಆವಲ ಮೂರ್ತಿ

Pages 72

₹ 65.00




Year of Publication: 2022
Published by: ನವಕರ್ನಾಟಕ ಪಬ್ಲಿಕೇಷನ್ಸ್‌
Address: ಬನ್ನೇರಘಟ್ಟ ರಸ್ತೆ, ಬೆಂಗಳೂರು- 560076
Phone: 080 22161900

Synopsys

ಲೇಖಕ ಡಾ. ಎ.ಓ. ಆವಲಮೂರ್ತಿ ಅವರು ಬರೆದ ವಿಜ್ಞಾನ ಸಂವಾದ ಕೃತಿ ʻಬೆಳ್ಳಿ ಕಪ್ಪಾಗುವುದು ಯಾಕೆ?ʼ. ಇದು ʼಪುಟ್ಟ- ಕಿಟ್ಟಿ ವಿಜ್ಞಾನ ಸಂವಾದʼದ 17ನೇ ಪುಸ್ತಕವಾಗಿದೆ. ಮಕ್ಕಳಲ್ಲಿ ಸಾಮಾನ್ಯವಾಗಿ ಹುಟ್ಟುವ ವಿಜ್ಞಾನದ ಕುರಿತಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳು ಈ ಪುಸ್ತಕದಲ್ಲಿವೆ.  ಬೆಳ್ಳಿ ಕಪ್ಪಾಗುವುದು ಏಕೆ?, ರಾತ್ರಿಯಲ್ಲಿ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವುದೇಕೆ?, ಮಿಂಚುಹುಳು ಮಿಂಚುವುದೇಕೆ?, ಹಡಗು ತೇಲುವುದು ಹೇಗೆ? ಬಣ್ಣ ಬಣ್ಣದ ಪಟಾಕಿಗಳ ತಯಾರಿಕೆ ಹೇಗೆ? ನಾವೇಕೆ ಮೂಗಿನ ಮೂಲಕವೇ ಉಸಿರಾಡಬೇಕು?, ಚಂಡಮಾರುತ ಉಂಟಾಗುವುದು ಹೇಗೆ?, ಚಂದ್ರನ ಮೇಲೆ ಕಲೆಗಳೇಕೆ?, ಸಸ್ಯಗಳೇಕೆ ಸೂರ್ಯನೆಡೆಗೆ ತಿರುಗುತ್ತವೆ?, ಬ್ರಷ್ ಆಡಿಸಿದಾಗ ನೊರೆ ಬರುವುದೇಕೆ?, ಕೆಲವರ ಕೂದಲೇಕೆ ಗುಂಗುರು?, ನಮ್ಮ ಕಣ್ಣು ಬಣ್ಣಗಳನ್ನು ಗುರುತಿಸುವುದು ಹೇಗೆ?, ಉಲ್ಕಾಪಿಂಡ ಎಂದರೇನು? ಹಾಗೂ ಅಪ್ಪಳಿಕೆ ಆಗುವುದೇಕೆ? ಹೀಗೆ ಒಟ್ಟು 14 ಲೇಖನಗಳಿವೆ.

About the Author

ಎ.ಓ. ಆವಲ ಮೂರ್ತಿ

ಎ.ಓ. ಆವಲಮೂರ್ತಿ ಅವರು ಭೌತ ವಿಜ್ಞಾನದ ವಿಶ್ರಾಂತ ಅಧ್ಯಾಪಕರು. ಕಳೆದ ಕೆಲವು ವರ್ಷಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಏನು ಮಾಡಬೇಕು ಎಂಬುದನ್ನು ಕುರಿತು ಚಿಂತನೆ, ಅಧ್ಯಯನ, ಪ್ರಯೋಗಗಳು ಮತ್ತು ಬರವಣಿಗೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಲವು ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ. ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕುರಿತೇ ಸಂಶೋಧನ ಪ್ರಬಂಧವನ್ನು ಬರೆದು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವೆಲ್ಲದರ ಮುಂದುವರಿದ ಭಾಗವಾಗಿ, ಇಂದಿನ ಶಿಕ್ಷಣದಲ್ಲಿ ಇರುವ ಚಿಂತನಶೀಲತೆಯನ್ನು ಮೈಗೂಡಿಸುವುದನ್ನೇ ಪ್ರಮುಖ ...

READ MORE

Related Books