ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ

Author : ಸಿ.ಕೆ ನಾವಲಗಿ

Pages 79

₹ 1.00




Year of Publication: 1993
Published by: ಪ್ರಸಾರಾಂಗ
Address: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ

Synopsys

ಕರ್ನಾಟಕ ವಿಶ್ವವಿದ್ಯಾಲಯವು ತನ್ನ ಪ್ರಸಾರಾಂಗದ ಮುಖಾಂತರ ನಡೆಸಿದ ಜ್ಞಾನಪ್ರಸಾರದ ಯೋಜನೆಯಲ್ಲಿ ’ಉಪನ್ಯಾಸ ಗ್ರಂಥಮಾಲೆ’ ಸರಣಿಯಲ್ಲಿ ಹೊರತಂದಿರುವ ಕಿರುಗ್ರಂಥ ’ ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ’ ವಿಷಯವನ್ನು ಸಿ.ಕೆ. ನಾವಲಗಿ ಅವರು  ಲಿಖಿತರೂಪದಲ್ಲಿ  ಪ್ರಕಟ ಮಾಡಿದ್ದಾರೆ.

ಹೊಸಗನ್ನಡ ಕಾವ್ಯದ ಮಹತ್ವದ ಕವಿ ಬೇಂದ್ರೆ ಅಪ್ಪಟ ದೇಸಿ ಕವಿ. ಜಾನಪದವನ್ನು ಅವಲಂಬಿಸಿ, ಜಾನಪದ ಕಾವ್ಯಸತ್ವದಿಂದ ಮೂಲ ಸ್ಫೂರ್ತಿಯನ್ನು ಪಡೆದ ಬೇಂದ್ರೆ ಜಾನಪದೀಯ ತುಡಿತದ ಕವಿಯಾಗಿದ್ದಾರೆ. ಬೇಂದ್ರೆಯವರ ಕಾವ್ಯದ ಮೇಲೆ ದಟ್ಟವಾಗಿ ಪ್ರಭಾವ ಬೀರಿದ ಜಾನಪದ ವಸ್ತು,ಭಾವ, ಭಾಷೆ, ಛಂದಸ್ಸು, ಲಯ ಮೊದಲಾದವುಗಳನ್ನು ಇಲ್ಲಿ ಸ್ಥೂಲವಾಗಿ ಪರಿಶೀಲಿಸಲಾಗಿದೆ. ಬೇಂದ್ರೆ  ಕಾವ್ಯದ ಜಾನಪದೀಯ ಅಂಶಗಳ ಬಗ್ಗೆ ಚರ್ಚಿಸುವ, ಮಾಹಿತಿಯನ್ನು ನೀಡುವ ಅಪೂರ್ವ ಕೃತಿ ಇದಾಗಿದೆ.

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books