ಬೇರು ಬದುಕು

Author : ನರೇಂದ್ರ ರೈ ದೇರ್ಲ

Pages 132

₹ 150.00




Year of Publication: 2020
Published by: ಕನಸು ಪ್ರಕಾಶನ
Address: ಮಡವು ಪೋಸ್ಟ್, ಪುತ್ತೂರು ತಾಲೂಕು, ದಕ್ಷಿಣ ಕನ್ನಡ
Phone: 9164561789

Synopsys

‘ಬೇರು ಬದುಕು’ ಲೇಖಕ ನರೇಂದ್ರ ರೈ ದೇರ್ಲ ಅವರ ಅಂಕಣ ಬರಹಗಳ ಸಂಕಲನ. ದಟ್ಟ ಅಡವಿಯ ಘನತೆ ಮತ್ತು ಸೌಂದರ್ಯಕ್ಕೆ ಸಾವಿರದ ಹೊಗಳಿಕೆ, ವಿವರಣೆ ಇರಬಹುದು, ಆದರೆ ಈ ಅಡವಿಯ ಘನತೆಗೆ ಕಾರಣವಾದ ಮಣ್ಣಿನೊಳಗೆ ಕಾಣದೇ ಇರುವ ಮರಗಳ ಬೇರುಗಳ ಗೋಳು ಕೇಳುವವರಾರು?. ಸಮಾಜ, ಪ್ರಕೃತಿ ಎಷ್ಟೇ ಪ್ರಬಲ ಆಗಿದ್ದರೂ ಉಳಿವಿಗೆ, ಒಳಿತಿಗೆ ಪರಿತಪಿಸುವ ಗಾತ್ರ. ಗೋತ್ರಕ್ಕಿಂತ ರಕ್ಷಣೆಯ ಸೂತ್ರ ಮುಖ್ಯವಾಗಿರುತ್ತದೆ. ಲೇಖಕ ನರೇಂದ್ರ ರೈ ದೇರ್ಲ ಅವರು ಇಂಥದ್ದೇ ಒಂದು ನೆಲೆಗಟ್ಟಿನಲ್ಲಿ ನೆಲ, ಜಲ, ಕೃಷಿ, ಸಮಾಜ, ಪ್ರಕೃತಿಯ ಬಗ್ಗೆ ಗೋಚರವಾಗುವ ವಿಚಾರಗಳನ್ನು ತಮ್ಮ ಲೇಖನಗಳ ಮೂಲಕ ಬೇರು ಬದುಕು ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ಕೃಷಿ, ಸಮಾಜ, ಪ್ರಕೃತಿ ಎಲ್ಲವನ್ನೂ ಬಹಳ ಆಳವಾಗಿ, ಸೂಕ್ಷ್ಮವಾಗಿ ಕಂಡಂತಹ ನರೇಂದ್ರ ರೈ ದೇರ್ಲ ಅವರು ಈ ಕೃತಿಯಲ್ಲಿ ಸಡಿಲಗೊಂಡ ಬೇರುಗಳು ಗಟ್ಟಿಯಾಗಬೇಕಾದರೆ ಮಣ್ಣು ಕೂಡಾ ಮೆದು ಆಗದೇ ಗಡಸು ಆಗಬೇಕು. ಅಂದರೆ ಸಮಾಜದ ಜನತೆ ಕೂಡಾ ನ್ಯಾಯದ ಪರ ಕೈ ಎತ್ತಬೇಕು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

About the Author

ನರೇಂದ್ರ ರೈ ದೇರ್ಲ
(14 October 1965)

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರು ಪತ್ರಕರ್ತರೂ ಹೌದು. ಹಾಗೆಯೇ  ಕವಿಗಳೂ ಕೂಡ. 'ತೊದಲು' ಕವನ ಸಂಕಲನದ ನಂತರ ಗದ್ಯ ಬರವಣಿಗೆ ಮುಂದುವರಿಸಿದರು.  ಆದರೆ, ಪದ್ಯದ ಗುಣ ಅವರ ಗದ್ಯಕ್ಕಿದೆ. ಅವರಿಗೆ ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ . ಹಾಗಯೇ ಪರಿಸರದ ಬಗ್ಗೆ ಗಾಢ ಅನುರಕ್ತಿ.  ತೇಜಸ್ವಿಯೊಳಗಿನ ಕಲಾವಿದ'ನನ್ನು ಕಂಡರಿಸಿದ ನರೇಮದ್ರ ಅವರು  'ನಮ್ಮೆಲ್ಲರ ತೇಜಸ್ವಿ'ಯ ಅನಾವರಣಗೊಳಿಸಿದ್ದಾರೆ. ’ವಿಶುಕುಮಾರ್ ಬದುಕು ಬರೆಹ'; 'ಹೊನ್ನಯ ಶೆಟ್ಟಿ ಬದುಕು ಬರೆಹ'; 'ಡಾ. ಮೋಹನ ...

READ MORE

Related Books