ಭಗವದ್ಗೀತೆ ವ್ಯಕ್ತಿತ್ವ ವಿಕಾಸ

Author : ಯತಿರಾಜ್‍ ವೀರಾಂಬುಧಿ

Pages 142

₹ 75.00




Year of Publication: 2015
Published by: ಸಾಧನ ಪಬ್ಲಿಕೇಷನ್ಸ್
Address: ಬೆಂಗಳೂರು

Synopsys

‘ಭಗವದ್ಗೀತೆ ವ್ಯಕ್ತಿತ್ವ ವಿಕಾಸ’ ತೆಲುಗಿನಲ್ಲಿ ಡಾ. ವೆಲುವೋಲು ನಾಗರಾಜ್ಯಲಕ್ಷ್ಮಿ ಅವರು ರಚಿಸಿರುವ ಕೃತಿಯನ್ನು ಲೇಖಕ ಯತಿರಾಜ್ ವೀರಾಂಬುಧಿ ಕನ್ನಡೀಕರಿಸಿದ್ದಾರೆ. ಭಗವದ್ಗೀತೆ ಕೇವಲ ಅಧ್ಯಾತ್ಮಿಕ ಗ್ರಂಥ ಮಾತ್ರವಲ್ಲ, ಮಾನವನ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡುವಂತ ಮಹತ್ತರವಾದ ಜೀವನಶಾಸ್ತ್ರ: ಮನುಷ್ಯನನ್ನು ಮನುಷ್ಯನಾಗಿ ಪರಿವರ್ತಿಸಿ, ಆ ನಂತರ ದೈವತ್ವದ ದಿಕ್ಕಿಗೆ ನಡೆಸುತ್ತದೆ. ಪ್ರತಿ ಮನುಷ್ಯನೂ ಸಮರ್ಥವಾಗಿ ವಿಜಯಪಥದಲ್ಲಿ ಪಯಣಿಸುವ ಮಾರ್ಗವನ್ನು ತೋರಿಸುತ್ತದೆ ಎಂಬುದನ್ನು ಈ ಕೃತಿಯಲ್ಲಿ ನಿರೂಪಿಸಲಾಗಿದೆ.

About the Author

ಯತಿರಾಜ್‍ ವೀರಾಂಬುಧಿ
(11 August 1957)

ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು-  ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...

READ MORE

Related Books