ಭಗವದ್ಗೇತೆಯ ಬೆಳಕಿನಲ್ಲಿ ವೈಯಕ್ತಿಕ ಉತ್ಕೃಷ್ಟತೆ

Author : ಸ್ವಾಮಿ ಸುಖಬೋಧಾನಂದ

Pages 170

₹ 113.00




Year of Publication: 2008
Published by: ಪ್ರಸನ್ನ ಟ್ರಸ್ಟ್
Address: ಬೆಂಗಳೂರು

Synopsys

ಭಗವದ್ಗೀತೆಯ ಬೆಳಕಿನಲ್ಲಿ ವೈಯಕ್ತಿಕ ಉತ್ಕೃಷ್ಟತೆ-ಈ ಕೃತಿಯನ್ನು ಧಾರ್ಮಿಕ ಗುರು ಸ್ವಾಮಿ ಸುಖಬೋಧಾನಂದ ಅವರು ರಚಿಸಿದ್ದು, ವ್ಯಕ್ತಿಗತ ವಿಕಾಸವು ಭಗವದ್ಗೀತೆಯ ಸಂದೇಶಗಳ ಪಾಲನೆಯಲ್ಲಿದೆ ಎಂಬುದನ್ನು ತರ್ಕಿಸಿ, ಸಮರ್ಥಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯವಾಗಿ ಹೆಚ್ಚು ಓದುಗರ ಗಮನ ಸೆಳೆದಿರುವ ಈ ಕೃತಿಯು , ಭಗವದ್ಗೀತೆಯು ಕೇವಲ ಗ್ರಂಥವಲ್ಲ; ಅದು ವ್ಯಕ್ತಿಯನ್ನು ಅಧ್ಯಾತ್ಮಿಕ ವಿಕಾಸದತ್ತ ಕೊಂಡೊಯ್ಯುತ್ತದೆ. ಭೌತಿಕ ಬದುಕಿನ ಸ್ವರೂಪವನ್ನು ತಿಳಿಸುತ್ತಲೇ ಅಲೌಕಿಕ ಬದುಕಿನ ಮಹತ್ವವನ್ನು ಸಾರುತ್ತದೆ. ಅಲೌಕಿಕ-ಲೌಕಿಕ _ಈ ಎರಡರ ಸಮನ್ವಯದ ಜೀವನ ಸಂದೇಶವೂ ಇಲ್ಲಿದೆ. ಸಾಮ್ಯತೆ-ವೈರುಧ್ಯ ಎರಡನ್ನೂ ಹೊಂದಿರುವ ಈ ಗ್ರಂಥ, ವ್ಯಕ್ತಿಯ ಬದುಕಿನ ಉತ್ಕೃಷ್ಟತೆಯನ್ನು ತಿಳಿ ಹೇಳುತ್ತದೆ ಎಂಬ ವಿಚಾರಗ:ಳು ಇಲ್ಲಿ ಮಂಡನೆಯಾಗಿವೆ.

About the Author

ಸ್ವಾಮಿ ಸುಖಬೋಧಾನಂದ

ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್‌ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...

READ MORE

Related Books