ಭಕ್ತವತ್ಸಲ

Author : ಗಿರೀಶ ಜಕಾಪುರೆ

Pages 84

₹ 150.00




Year of Publication: 2019
Published by: ಶ್ರೀ ಶಿವಲಿಂಗೇಶ್ವರ ವಿರಕ್ತಮಠ
Address: ಮಾದನಹಿಪ್ಪರಗಿ, ಆಳಂದ
Phone: 9591071469

Synopsys

ಅಧ್ಯಾತ್ಮದಲ್ಲಿ ಭಕ್ತಿಮಾರ್ಗದಿಂದ ಮುಕ್ತಿಯನ್ನು ಸಾಧಿಸುವ ಕುರಿತು ಹಲವಾರು ಸತ್ಪುರುಷರು, ಶರಣರು ಅನುಭಾವಿಗಳು ಹಾಗೂ ಚಿಂತಕರು ತಮ್ಮ ತಮ್ಮ ಅನುಭವಗಳನ್ನು ಲೋಕದೊಂದಿಗೆ ಹಂಚಿಕೊಂಡಿದ್ದಾರೆ. ಶರಣರು ಹೇಳಿದ ಮಾರ್ಗದಲ್ಲಿ ಅವರ ಅನುಯಾಯಿಗಳು ನಡೆದು ತಮ್ಮ ಬದುಕನ್ನು ಹಸನುಗೊಳಿಸಿಕೊಂಡಿದ್ದಾರೆ. ಭಕ್ತಿಯೆಂಬುದು ಮುಕ್ತಿಗೆ ಒಂದು ಮಾರ್ಗವೇ ಹೊರತು ಅದೇ ಗುರಿಯಲ್ಲ ಎಂಬ ತತ್ವವನ್ನು ಸಾರಿದವರು ಕಲಬುರಗಿ ಜಿಲ್ಲೆಯ ಮಾದನ ಹಿಪ್ಪರಗಿ ಗ್ರಾಮದ ಶ್ರೀ ಶಿವಲಿಂಗ ಮಹಾಸ್ವಾಮಿಗಳು. ಅವರು ಭಕ್ತಿಯ ಕುರಿತು ಹಲವಾರು ಅನ್ವೇಷಣೆ, ಪ್ರಯೋಗ ಮಾಡಿದವರು ಹಾಗೂ ಅನುಭವಗಳ ಮೂಲಕ ಅನುಭಾವವನ್ನು ಸಾಧಿಸಿದವರು. ಅವರು ಭಕ್ತಿಯ ಬಗ್ಗೆ ನೀಡಿದ ಉಪನ್ಯಾಸಗಳು, ಭಕ್ತಿಯ ಕುರಿತು ಬರೆದ ಬರಹಗಳು ಬಹಳ ಪ್ರಭಾವಿ ಹಾಗೂ ವಿದ್ವತ್ಪೂರ್ಣವಾಗಿವೆ. ಶ್ರೀಗಳ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಭಕ್ತಿ ಎಂಬ ವಿಷಯನ್ನು ಕೇಂದ್ರವಾಗಿಟ್ಟುಕೊಂಡು ಶ್ರೀಗಳ ಸಾಹಿತ್ಯದ ಜೊತೆ ಜೊತೆಗೆ ನಾಡಿನ ವಿಭಿನ್ನ ಶ್ರೀಗಳು, ಸದ್ಗುರುಗಳು, ಚಿಂತಕರು ಹಾಗೂ ಬರಹಾರರಿಂದ ಭಕ್ತಿಯ ಕುರಿತು ಅವರ ವಿಚಾರ, ಅನುಭವಗಳನ್ನು ಲೇಖನ ಸ್ವರೂಪದಲ್ಲಿ ಬರೆಯಿಸಿ ಇಲ್ಲಿ ಸಂಗ್ರಹಿಸಲಾಗಿದೆ. ಶಿವಲಿಂಗ ಶ್ರೀಗಳು, ಸದ್ಗುರು ಮಹಾನಂದಾತಾಯಿ ಹಿರೇಮಠ, ಕುಮಾರದೇವರು, ಡಾ. ರಹಮತ ತರೀಕೆರೆ, ಡಾ. ಪಿ. ಚಂದ್ರಿಕಾ, ಲಕ್ಷ್ಮೀಶ ತೋಳ್ಪಾಡಿ, ಚಂದ್ರಶೇಖರ ತಾಳ್ಯ ಹೀಗೆ ಘಟಾನುಘಟಿಗಳು ಭಕ್ತಿಯ ಕುರಿತು ಬರೆದ ಅಮೂಲ್ಯ ಲೇಖನಗಳು ಇಲ್ಲಿವೆ. ಶ್ರೀ ಶಿವಲಿಂಗ ಮಹಾಸ್ವಾಮಿಗಳ ಬದುಕು ಹಾಗೂ ಕಾರ್ಯಗಳ ಕುರಿತ ಪರಿಚಯಾತ್ಮಕ ಬರಹವೂ ಇಲ್ಲಿದೆ.   

About the Author

ಗಿರೀಶ ಜಕಾಪುರೆ
(09 September 1981)

ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ‌ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...

READ MORE

Related Books