ಭಂಡಾರ ಭೋಗ

Author : ಚಂದ್ರಕಾಂತ ಪೋಕಳೆ

Pages 128

₹ 50.00




Year of Publication: 2008
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಲೇಖಕ ರಾಜನ್ ಗವಸ್ ಅವರ ‘ಭಂಡಾರ ಭೋಗ’ ಮರಾಠಿ ಕಾದಂಬರಿಯನ್ನುಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದು, ಈ ಕೃತಿಗೆ ಕುವೆಂಪು ಭಾಷಾ ಭಾರತಿ ಅನುವಾದ ಪುರಸ್ಕಾರ (2008) ಲಭಿಸಿದೆ. ಮನುಷ್ಯನಿಗೆ ಸಂಬಂಧಿಸಿದ ಸಾಮುದಾಯಿಕ ವಿವರಗಳು ಇಲ್ಲಿಯ ಕಥಾ ವಸ್ತು. ಸಮಾಜದ ಸಾಂಸ್ಕೃತಿಕ, ಧಾರ್ಮಿಕ ರೂಢಿ ವ್ಯವಸ್ಥೆಯ ಮಹತ್ವವನ್ನು ಕಟ್ಟಿಕೊಡಲಾಗಿದೆ.

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Excerpt / E-Books

ರಾಜನ್ ಗವಸರು ಮರಾಠಿ ಕಾದ೦ಬರಿ ಲೋಕದ ಕ್ರಿಯಾತ್ಮಕ ಬರಹಗಾರರು. ಮನುಷ್ಯನನ್ನು ಕೇಂದ್ರದಲ್ಲಿರಿಸಿಕೊಂಡು ಸಾಮಾಜಿಕ ಸಂಗತಿಗಳನ್ನು ಸಶಕ್ತವಾಗಿ ಸೂಕ್ಷ್ಮವಾಗಿ ಬರೆಯುವವರು. ತಮ್ಮ ಬರವಣಿಗೆ ಮೂಲಕ ಸಮಾಜದಲ್ಲಿ ರೂಢಿಯ ಹೆಸರಿನಲ್ಲಿ ನಡೆಯುವ ಅಮಾನುಷ ಕೌರ್ಯ, ಸ್ವಾರ್ಥ ಸಾಧನೆಯನ್ನು ಬಯಲುಮಾಡುತ್ತಾ ಬಂದಿದ್ದಾರೆ. ಈ ಕಾದಂಬರಿಯಲ್ಲಿ ರೂಢಿ-ಪರಂಪರೆಯ ಹೆಸರಿನಲ್ಲಿ ದೇವರಿಗೆ ಬಿಟ್ಟ ಜೋಗಪ್ಪನ ನರಕಸದೃಶ ಜೀವನದ ಚಿತ್ರಣವನ್ನು ಮನಮಿಡಿಯುವಂತೆ ಚಿತ್ರಿಸಿದ್ದಾರೆ. 'ತಾಯಪ್ಪ'ನ ಪಾತ್ರದ ಸುತ್ತ ನಡೆಯುವ ಘಟನೆಗಳ ಮೂಲಕ ನಿರ್ದಿಷ್ಟ ಜನಾಂಗವೊಂದರ ಸಾಂಸ್ಕೃತಿಕ, ಧಾರ್ಮಿಕ ರೂಢಿವ್ಯವಸ್ಥೆಯ ಅಂಧಶ್ರದ್ಧೆಯನ್ನು ಪರಿಚಯಿಸುತ್ತಾ, ಚಿಂತನೆಗೆ ಹಚ್ಚಿಸುತ್ತಾರೆ. ಈಗಾಗಲೇ ಹಲವು ಮರಾಠಿ ಕೃತಿಗಳನ್ನು ಕನ್ನಡದಲ್ಲಿ ಸಮರ್ಥವಾಗಿ ನೀಡಿರುವ ಚಂದ್ರಕಾಂತ ಪೋಕಳೆಯವರು ಅನುವಾದ ಮಾಡಿದ್ದಾರೆ.

ಪುಸ್ತಕ ಪರಿಚಯ- ಕೃಪೆ:ಹೊಸತು 

Related Books