ಭಾರತದ ಜ್ವಲಂತ ಸಮಸ್ಯೆಗಳು ಮತ್ತು ಮಾಧ್ಯಮ

Author : ಅಭಿಲಾಷಾ ಆರ್ 

Pages 88

₹ 70.00




Year of Publication: 2018
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಯುವ ಪತ್ರಕರ್ತೆ ಅಭಿಲಾಷಾ ಆರ್  ಅವರ ’ ಭಾರತದ ಜ್ವಲಂತ ಸಮಸ್ಯೆಗಳು ಮತ್ತು ಮಾಧ್ಯಮ’ ಕೃತಿಯು ಪ್ರಸ್ತುತ ಭಾರತ ಎದುರಿಸುತ್ತಿರುವ ಹಲವಾರು ವಿಷಯಗಳನ್ನು ಪ್ರಸ್ತಾಪಿಸುತ್ತದೆ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸಿದಾಗ ಪ್ರಜಾಪ್ರಭುತ್ವ ಆತಂಕಕ್ಕೆ ಒಳಗಾದಂತೆ ಕಾಣುತ್ತದೆ. ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಾವಶ್ಯಕ.  ಜಗತ್ತಿನ ಮತ್ತು ಭಾರತದಲ್ಲಿ ಆಗುತ್ತಿರುವ ಪ್ರಮುಖ ಬದಲಾವಣೆಯನ್ನು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಇವೆಲ್ಲವುಗಳ ಹಿನ್ನೆಲೆಯಾಗಿ ಇಲ್ಲಿರುವ ಅನೇಕ ಪ್ರಬಂಧಗಳು ಬಹಳ ಪ್ರಮುಖವಾಗಿದೆ.

ದೇಶ ಎದುರಿಸಿದ ಅನಕ್ಷರತೆಯ ಸವಾಲು, ಬಡತನ ನಿವಾರಣೆಯ ಗತಿ ಸಾಲದು, ಮೂಢ ನಂಬಿಕೆಗಳ ನಿರ್ಮೂಲನೆ ಸಾಧ್ಯವೇ?, ಕೃಷಿ ಬಿಕ್ಕಟ್ಟಿಗೆ ಪರಿಹಾರ ಸಾಧ್ಯ, ಬಲಗೊಳ್ಳಬೇಕಿದೆ ಸಮುದಾಯ ಆರೋಗ್ಯ, ನಿರುದ್ಯೋಗ ನಿವಾರಣೆಗೆ ಆದ್ಯತೆ ಅಗತ್ಯ, ಇಂಧನ ಬಿಕ್ಕಟ್ಟು ಅಭಿವೃದ್ದಿಗೆ ಮಾರಕ, ಪರಿಸರ ಮಾಲಿನ್ಯ- ಜೀವ ಜಗತ್ತಿನ ಅಳಿವು ಉಳಿವಿನ ಸವಾಲು ಮುಂತಾದ ಪ್ರಮುಖ ಲೇಖನಗಳು ಇಲ್ಲಿವೆ.

About the Author

ಅಭಿಲಾಷಾ ಆರ್ 

ಅಭಿಲಾಷ ಆರ್ ಅವರು ಹಿರಿಯ ಪತ್ರಕರ್ತ ಡಿ.ವಿ.ರಾಜಶೇಖರ್ ಅವರ ಮಗಳು. ಬೆಂಗಳೂರಿನ ಎನ್.ಎಂ.ಕೆ.ಆರ್.ವಿ ಕಾಲೇಜಿನಲ್ಲಿ ಪತ್ರಿಕೊದ್ಯಮದಲ್ಲಿ ಪದವಿ ಮುಗಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ, ಹಾಗೂ ಎಲೆಕ್ಟ್ರಾನಿಕ್ ಮಿಡಿಯಾ ಮಾಡಿದ್ದು, ಆನಂತರ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮುಗಿಸಿದ್ದಾರೆ. ಎನ್.ಡಿಟಿವಿಯ ಮೂಲಕ ಪತ್ರಿಕೋದ್ಯಮಕ್ಕೆ ಬಂದ ಅಭಿಲಾಷ ಅವರು ನಂತರದಲ್ಲಿ ಉಪನ್ಯಾಸ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು, ಸದ್ಯ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ...

READ MORE

Related Books