ಭಾರತದ ಪ್ರಜೆಗಳಾದ ನಾವು...

Author : ಬಿ. ಗಂಗಾಧರಮೂರ್ತಿ

Pages 50

₹ 60.00




Published by: ಲಡಾಯಿ ಪ್ರಕಾಶನ
Address: ಲಡಾಯಿ ಪ್ರಕಾಶನ, 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಲೇಖಕ ಬಿ. ಗಂಗಾಧರಮೂರ್ತಿ ಮತ್ತು ಆರ್.‌ ಶೋಭಾ ಅವರ ಅನುವಾದಿತ ಕೃತಿ ʻಭಾರತದ ಪ್ರಜೆಗಳಾದ ನಾವು... ಸಂವಿಧಾನದ ಭಾಷೆಯಲ್ಲಿ ಭಾರತʼ. ಪ್ರಸ್ತುತ ಪುಸ್ತಕ ಭಾರತದ ಸಂವಿಧಾನವನ್ನು ಮಕ್ಕಳಿಗೆ ಸರಳ ವಾಕ್ಯಗಳಲ್ಲಿ ಪರಿಚಯಿಸುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನು ನೀಡುತ್ತಾ, ಸಂವಿಧಾನ ಎಂದರೆ ಏನು, ಅದರ ರಚನೆ, ರಾಷ್ಟ್ರದ ನೀಲನಕ್ಷೆ, ಎಪ್ಪತ್ತು ವರ್ಷಗಳಲ್ಲಿ ಸಂವಿಧಾನದ ಅಡಿಯಲ್ಲಿ ಎಲ್ಲರೂ ಒಟ್ಟಾಗಿ ಸಾಧಿಸಿದ ಸಾಧನೆಗಳು ಹೀಗೆ ಸಂವಿಧಾನದ ಕುರಿತಾದ ಹಲವಾರು ವಿಚಾರಗನ್ನು ನೀಡುತ್ತದೆ. ಜೊತೆಗೆ ಭವಿಷ್ಯದ ಬಗ್ಗೆ ನಾವೇನು ಯೋಚಿಸುತ್ತೇವೆ, ನಮ್ಮ ದೇಶಕ್ಕೆ ನಮ್ಮ ವಾಗ್ದಾನವೇನು, ಆಗಬೇಕಾದ ಕಾರ್ಯಗಳೇನು ಎಂಬ ವಾಸ್ತವದ ವಿಶ್ಲೇಷಣೆಯನ್ನೂ ನೀಡಿದ್ದಾರೆ.

About the Author

ಬಿ. ಗಂಗಾಧರಮೂರ್ತಿ - 10 September 2022)

ಲೇಖಕ ಪ್ರೊ. ಬಿ. ಗಂಗಾಧರ ಮೂರ್ತಿ ಅವರು ಮೂಲತಃ  ಹೊಳೆನರಸೀಪುರದವರು. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ಸುಮಾರು 30 ಬೊಧನೆ ಮಾಡಿದವರು. ’’ನವ್ಯ ಕತೆಗಳು” ಅವರು ಬರೆದ ವಿಮರ್ಶಾ ಲೇಖನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ ನೀಡಿ ಗೌರವಿಸಿದೆ. ಅನುವಾದ ಕ್ಷೇತ್ರದಲ್ಲಿ ಇವರ ಸೇವೆ ಗಮನಿಸಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರಶಸ್ತಿ ನೀಡಿ ಗೌರವಿಸಿದೆ. ಸೂಫಿ ಕಲ್ಚರ್ ಸಂಪಾದಕ  ಸಮಿತಿಯಲ್ಲಿ ಪ್ರವಾಚಕರಾಗಿದ್ದರು. ಭಾರತ ಜ್ಞಾನ-ವಿಜ್ಞಾನ ಸಮಿತಿ ಪ್ರಕಟಿಸುತ್ತಿದ್ದ ‘ಟೀಚರ್’ ಮಾಸಿಕದ ಮುಖ್ಯ ಸಂಪಾದಕರಾಗಿದ್ದರು. ಕರ್ನಾಟಕದ ಗೌರಿಬಿದನೂರು ನಗರದಲ್ಲಿ ವಾಸವಿದ್ದು, ವಿದುರಾಶ್ವತ ಫ್ರೀಡಂ ಮೆಮೊರಿಯಲ್ ಮ್ಯೂಜಿಯಂ ಸಂಸ್ಥೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.  ...

READ MORE

Related Books