ಭಾರತೀಯ ಸಮಾಜದ ಐತಿಹಾಸಿಕ ವಿಶ್ಲೇಷಣೆ

Author : ಪ್ರಧಾನ್ ಗುರುದತ್ತ

Pages 256

₹ 175.00

Buy Now


Year of Publication: 2014
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

'ಭಾರತೀಯ ಸಮಾಜದ ಐತಿಹಾಸಿಕ ವಿಶ್ಲೇಷಣೆ' ಭಗವತ್ ಶರಣ ಉಪಾಧ್ಯಾಯ ಅವರ ಸಾಂಸ್ಕೃತಿಕ ಪ್ರಬಂಧಗಳ ಸಂಗ್ರಹ. ಪುಸ್ತಕದ ಮೊದಲ ಲೇಖನ, 'ಗೀತೆ - ನೋಟವೋ ಹೋರಾಟವೋ'ದಲ್ಲೇ ಲೇಖಕರ ಬರವಣಿಗೆಯ ಸ್ವರೂಪ ಮತ್ತು ತಾತ್ವಿಕ ಕಾಳಜಿ ಪರಿಚಯವಾಗುತ್ತದೆ. 'ಸ್ವತಂತ್ರ ದರ್ಶನ ಅಥವಾ ನೋಟವೆಂಬಂತೆ ಇದುವರೆಗೆ ಭಗವದ್ಗೀತೆ'ಯ ಅಧ್ಯಯನ ನಡೆದಿದೆ. ವಾಸ್ತವವಾಗಿ, ಈ ದೃಷ್ಟಿಕೋನವೇ ದಾರಿ ತಪ್ಪಿಸುವಂಥದು. ಪ್ರತಿಯೊಂದು ಗ್ರಂಥವೂ - ಅದು ಸಾಹಿತ್ಯಕವಾಗಿರಲಿ ಅಥವಾ ಸಂಗತಿನಿಷ್ಠ ವರದಿಯಾಗಿರಲಿ - ಸಾಮಾನ್ಯವಾಗಿ ಐತಿಹಾಸಿಕವಾಗಿರುತ್ತದೆ. ಅದಕ್ಕೆ ಐತಿಹಾಸಿಕ ವ್ಯಾಖ್ಯೆಯನ್ನು ಕೊಡಬಹುದು. ಇತಿಹಾಸದ ದೃಷ್ಟಿಕೋನದಿಂದ ನೋಡಿದಾಗ, “ಗೀತೆ” ರೇಖೆಯ ಅಂಚಿನಲ್ಲಿ ನಿಂತಿರುವುದು ಸ್ಪಷ್ಟವಾಗುತ್ತದೆ. ಅದರಲ್ಲಿ ಬಾಹ ಣ ಮತ್ತು ಕತಿಯ ವರ್ಗಗಳು ಪ್ರಜ್ಞಾಪೂರ್ವಕವಾಗಿ ಹೋರಾಟ ನಡೆಸುವುದನ್ನು ಕಾಣುತ್ತೇವೆ.

About the Author

ಪ್ರಧಾನ್ ಗುರುದತ್ತ
(30 May 1938)

ಲೇಖಕ, ಅನುವಾದಕ ಪ್ರಧಾನ್ ಗುರುದತ್‌ ಅವರು ಹುಟ್ಟಿದ್ದು 30-05-1938ರಂದು ಚಿಕ್ಕಬಳ್ಳಾಪುರದಲ್ಲಿ.  ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆದ ಅವರು ಕನ್ನಡದಲ್ಲಿ ಎಂ.ಎ.ಆನರ್ಸ್, ಅನುವಾದದಲ್ಲಿ ಎಂ.ಎ., ಜೊತೆಗೆ ಪ್ರೊ.ವೆಂಕಟರಾಮಪ್ಪನವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದ್ದಾರೆ. ಪಿಎಚ್.ಡಿ ವಿಷಯವಾಗಿ ಕೃಷ್ಣ ಕಥೆಯ ಉಗಮ ಮತ್ತು ವಿಕಾಸ. ತುಮಕೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ. ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ. ಕುವೆಂಪು ಕನ್ನಡ ಅಧ್ಯಯನಪೀಠದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ 1998ರಲ್ಲಿ ನಿವೃತ್ತರಾಗಿದ್ದಾರೆ. ಬಹುಮುಖ ಪ್ರತಿಭೆ, ಅಪರೂಪದ ಪ್ರಾಧ್ಯಾಪಕರು, ಬಹುಭಾಷಾಪಂಡಿತರು ಆಗಿರುವ ಪ್ರಧಾನ್ ಗುರುದತ್ತರು 150ಕ್ಕೂ ಮಿಗಿಲಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸುಮಾರು ...

READ MORE

Related Books