ಭಾರತೀಯ ಯುದ್ಧ ಪರಂಪರೆ ಮತ್ತು ಸೈನಿಕನೇಕೆ ಹೋರಾಡುತ್ತಾನೆ

Author : ಎಸ್.ಸಿ. (ಶ್ರೀಕೃಷ್ಣ) ಸರದೇಶಪಾಂಡೆ

Pages 188

₹ 180.00




Year of Publication: 2020
Published by: ಮನೋಹರ ಗ್ರಂಥ ಮಾಲಾ
Address: ಸುಭಾಶ ಬೀದಿ, ಧಾರವಾಡ

Synopsys

ಭಾರತೀಯ ಸೇನೆಯಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಆದ ಲೇಖಕ ಎಸ್.ಸಿ. ಸರದೇಶಪಾಂಡೆ ಅವರ ಕೃತಿ-ಭಾರತೀಯ ಯುದ್ಧ ಪರಂಪರೆ ಹಾಗೂ ಸೈನಿಕನೇಕೆ ಹೋರಾಡುತ್ತಾನೆ. ಹೆಂಡತಿ ಮಕ್ಕಳಿಂದ ದೂರವಾಗಿದ್ದು, ಕೇವಲ ದೇಶವೇ ತಮ್ಮ ಆಸ್ತಿ, ಸಂಪತ್ತು. ದೇಶದ ಜನತೆಯೇ ತಮ್ಮ ಬಂಧು-ಬಳಗ ಎಂದು ತಿಳಿದು ವೈರಿಗಳೊಂದಿಗೆ ಆ ಸೈನಿಕ ಹೋರಾಡಬೇಕಾದರೆ ಆ ದೇಶಪ್ರೇಮವನ್ನು ಯಾವ ಮಾನದಂಡದಿಂದ ಅಳೆಯಲು ಸಾಧ್ಯ?. ಅಂತಹ ನಿಸ್ವಾರ್ಥ ಭಾವನೆಯೊಂದಿಗೆ ಸೈನಿಕ ದೇಶವನ್ನು ತಮ್ಮ ನಿಸ್ವಾರ್ಥ ಸಂಕಲ್ಪದೊಂದಿಗೆ ಗಡಿಯಲ್ಲಿ ಕೊರೆಯುವ ಚಳಿಯಲ್ಲಿ ಕಾವಲು ಕಾಯುತ್ತಾರೆ. ಭಾರತೀಯ ಯುದ್ಧ ಪರಂಪರೆ ಹಾಗೂ ಸೈನಿಕರ ನಿಸ್ವಾರ್ಥ ಸೇವೆಯ ಕುರಿತು ಲೇಖಕರು ತಮ್ಮ ಅನುಭವವನ್ನು ಪಣ್ಣಕ್ಕೆ ಇಟ್ಟು ಬರೆದ ಕೃತಿ ಇದು.

About the Author

ಎಸ್.ಸಿ. (ಶ್ರೀಕೃಷ್ಣ) ಸರದೇಶಪಾಂಡೆ

ವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಸಿ. (ಶ್ರೀಕೃಷ್ಣ)  ಸರದೇಶಪಾಂಡೆ ಅವರು ಮೂಲತಃ ಧಾರವಾಡದವರು. ಭಾರತೀಯ ಸೇನೆಯ ಕುಮಾಂವು ರೆಜಿಮೆಂಟ್ ನಲ್ಲಿ 35 ವರ್ಷ ಸೇವೆ ಸಲ್ಲಿಸಿದರು. 1990ರಲ್ಲಿ ನಿವೃತ್ತರಾದರು. ಕಥೆ-ಕಾದಂಬರಿ ರಚಿಸುತ್ತಿದ್ದು, ಪರಿಸರ ಕುರಿತ ಲೇಖನಗಳನ್ನು ಬರೆಯುತ್ತಿದ್ದಾರೆ. ಸಮರ ಕುರಿತ ಬರಹಗಳೂ ಇವೆ. ಈಗಾಗಲೇ ಒಟ್ಟು 20 ಕೃತಿಗಳನ್ನು ರಚಿಸಿದ್ದಾರೆ. ಮಿಲಿಟರಿ ಸಂಬಂಧಿತ ಬರಹಗಳನ್ನು ಕನ್ನಡದಲ್ಲಿ ತರುವ ಪ್ರಯತ್ನ ಇವರದು.  ಕೃತಿಗಳು: ಭಾರತೀಯ ಯುದ್ಧ ಪರಂಪರೆ ಮತ್ತು ಸೈನಿಕನೇಕೆ ಹೋರಾಡು ತ್ತಾನೆ.  ‘ಸಿಯಾಚಿನ್ ಗೆ ದೂರ ದಾರಿ ಅದೇಕೆ? (ಅನುವಾದಿತ ಕೃತಿಗಳು), ಯುದ್ಧ ಯೋಧ (ಯುದ್ಧ ಹಾಗೂ ಯೋಧರ ಸ್ಥಿತಿಯ ಚಿತ್ರಣ)  ...

READ MORE

Related Books