ಭರತೇಶ ವೈಭವ ಶೋಭನ ಸಂಧಿಗಳು

Author : ಮಿರ್ಜಿ ಅಣ್ಣಾರಾಯ

Pages 81

₹ 1.00




Year of Publication: 1951
Published by: ಶಾಂತಿ ಸೇವಾ ಸದನ
Address: ಸೇಡಬಾಳ, ಬೆಳಗಾವಿ ಜಿಲ್ಲೆ

Synopsys

ಭರತೇಶ ವೈಭವದ ಶೋಭನ ಸಂಧಿಗಳು-ಮಿರ್ಜಿ ಅಣ್ಣಾರಾಯರು ಬರೆದ ವಿದ್ವತ್ ಪೂರ್ಣ ಚರಿತ್ರೆ. ಕವಿ ರತ್ನಾಕರ ವರ್ಣಿಯು ಭೋಗವಿಜಯ, ದಿಗ್ವಿಜಯ, ಯೋಗ ವಿಜಯ, ಮೋಕ್ಷವಿಜಯ ಹಾಗೂ ಅರ್ಕಕೀರ್ತಿವಿಜಯ ಎಂದು ವಿಭಾಗಿಸಿ ಭರತೇಶನ ವೈಭವವನ್ನು ವರ್ಣಿಸಿದ್ದಾನೆ. ಭೋಗವಿಜಯದ ಆರಂಭದ ಸಂಧಿಗಳಿಗೆ ಶೋಭನ ಸಂಧಿಗಳು ಎನ್ನುತ್ತಾರೆ. ಕವಿಯು ಭೋಗ-ಯೋಗ ಎರಡರ ಸಮನ್ವಯವನ್ನು ಈ ಮಹಾಕಾವ್ಯದಲ್ಲಿ ಕಾಣಬಹುದು ಎಂದು ಲೇಖಕ ಮಿರ್ಜಿ ಅಣ್ಣಾರಾಯರು ತಾವು ಸಂಪಾದಿಸಿದ ಈ ಕೃತಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೃತಿಯಲ್ಲಿ ಶೋಭನಸಂಧಿಗಳು ಹಾಗೂ ಪೀಠಿಕೆ, ಪ್ರಥಮ ಕಲ್ಯಾಣದ ಶೋಭನ ಸಂಧಿ, ಮಧ್ಯ ಮಂಗಲದ ಶೋಭನ ಸಂಧಿ, ಕಲ್ಯಾಣದ ಶೋಭನ ಸಂಧಿ, ಧವಲ ಶೋಭನ, ಅಂತ್ಯ ಮಂಗಲ ಕಲ್ಯಾಣ ಸಂಧಿ -ಈ ಶೀರ್ಷಿಕೆಗಳಡಿ ಕಾವ್ಯಗಳನ್ನು ಸಂಪಾದಿಸಲಾಗಿದೆ. ಕೊನೆಯಲ್ಲಿ ಶಬ್ದಕೋಶ ನೀಡಿದ್ದು, ಮಹಾಕಾವ್ಯವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗಿದೆ. 

About the Author

ಮಿರ್ಜಿ ಅಣ್ಣಾರಾಯ
(25 March 1918 - 11 December 1975)

ಪ್ರಸಿದ್ಧ ಸಾಹಿತಿಗಳು, ಸಮಾಜ ಸುಧಾರಕರೂ ಆದ ಮಿರ್ಜಿ ಅಣ್ಣಾರಾಯರು ಹುಟ್ಟಿದ್ದು (ಜನನ 25-03-1918, ಮರಣ: 11-12-1975) ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ. ಕನ್ನಡ ಭಾಷೆಯ ಜೊತೆಗೆ ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆಗಳಲ್ಲಿ ಪ್ರಭುತ್ವ. ಪಡೆದಿದ್ದರು.  ನಿಸರ್ಗ’ ಇವರು ಬರೆದ ಮೊದಲ ಕಾದಂಬರಿ. ಭಾಷೆಯ ಹೊಸತನ, ಸರಳ ನಿರೂಪಣೆಯಿಂದ ಕೂಡಿದ ಕಾದಂಬರಿ. ಚಾರಿತ್ರಿಕ ಕಾದಂಬರಿಗಳು: ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ. ಪೌರಾಣಿಕ ಕಾದಂಬರಿ- ಋಷಭದೇವ. ಕಥಾಸಂಕಲನಗಳು-ಪ್ರಣಯ ಸಮಾ, ಅಮರ ಕಥೆಗಳು, ವಿಜಯಶ್ರೀ. ಶೈಕ್ಷಣಿಕ ಗ್ರಂಥಗಳು-ಭಾಷಾ ಶಿಕ್ಷಣ, ಲೇಖನ ಕಲೆ, ಮೂಲ ಶಿಕ್ಷಣದ ಮೌಲ್ಯಮಾಪನ. ವಿಮರ್ಶಾ ಕೃತಿಗಳು-ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ...

READ MORE

Related Books