ಭಾರತ ಬೆಳಗಿದ ಬೆಳಕು

Author : ವಿ. ಮುನಿವೆಂಕಟಪ್ಪ

Pages 384

₹ 380.00




Year of Publication: 2018
Published by: ವಿಚಾರವಾದಿ ಪ್ರಕಾಶನ
Address: # 1240, 3ನೇ ಅಡ್ಡರಸ್ತೆ, ಗಂಗೆ ರಸ್ತೆ, ಕುವೆಂಪುನಗರ, ಮೈಸೂರು-570023

Synopsys

ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ಭಾರತ ಬೆಳಗಿದ ಬೆಳಕು. ದಲಿತರು ದೇವಾಲಯ ಪ್ರವೇಶವನ್ನು ಏಕೆ ಬಯಸುತ್ತಾರೆ ಎಂದರೆ ಅವರ ಪ್ರವೇಶದಿಂದ ದೇವಾಲಯ ಕಲುಷಿತಗೊಳ್ಳದು. ದೇವರು ಕೋಪಗೊಳ್ಳಲಾರ ಎಂಬುದನ್ನು ತೋರಿಸಿಕೊಡುವುದಷ್ಟೇ! ದೇವಾಲಯದಲ್ಲಿ ದೇವರು ಇದ್ದಾನೆ ಎಂದು ಪ್ರವೇಶ ಬಯಸುವುದಿಲ್ಲ. ಮತ್ತು, ಹಿಂದೂ ಎಂಬುದು ಒಂದು ಧರ್ಮ ಅಲ್ಲ; ಅದರಲ್ಲಿ ಗುಲಾಮಿತನ ಎಂಬುದು ಇರುತ್ತಿರಲಿಲ್ಲ. ಗುಲಾಮಿತನ ಇದೆ ಎಂದರೆ ಅದು ಧರ್ಮವಲ್ಲ. ಆದರೆ, ಧರ್ಮ ಎಂದು ಪ್ರತಿಪಾದಿಸುವ ಮನುಸೃತಿಯನ್ನು ಡಾ. ಅಂಬೇಡ್ಕರ್ ಅವರು ದಹನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇಂತಹ ಚಿಂತನೆಗಳ ಜಾಗೃತಿಗಾಗಿ ಲೇಖಕರು ಬರೆದ ಲೇಖನಗಳ ಸಂಗ್ರಹವೇ ಈ ಕೃತಿ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books