ಭಾರತೀಯ ಸಾಹಿತ್ಯ ನಿರ್ಮಾಪಕರು ಕೆ.ಎಸ್.ನಿಸಾರ್ ಅಹಮದ್

Author : ಎಂ.ಎಸ್.ರಘುನಾಥ್

Pages 112

₹ 50.00




Year of Publication: 2022
Phone: 08022245152

Synopsys

ಲೇಖಕ ಎಂ.ಎಸ್.ರಘುನಾಥ್ ಅವರು ಭಾರತೀಯ ಸಾಹಿತ್ಯ ನಿರ್ಮಾಪಕರು ಸರಣಿಯಲ್ಲಿ ಬರೆದಿರುವ ಜೀವನ ಚಿತ್ರ ಕೆ.ಎಸ್. ನಿಸಾರ್ ಅಹಮದ್. ಕೃತಿಯಲ್ಲಿ ಲೇಖಕರೇ ಬರೆದಿರುವಂತೆ, ನಿಸಾರ್ ಅವರ ಸಾಹಿತ್ಯ ಪ್ರವೇಶಕ್ಕೆ ಅನುವಾಗುವಂತಹ ಈ ಪುಸ್ತಕ ಬರೆಯುವ ಅವಕಾಶ ಸಿಕ್ಕಾಗ ಉತ್ಸಾಹದಿಮದ ಒಪ್ಪಿಕೊಂಡೆ. ನಿಸಾರರ ವಿಫುಲ ಸಾಹಿತ್ಯದ ಪರಿಚಯ ಮಾತ್ರ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆಯೇ ಹೊರತು, ಇದು ಸಮಗ್ರ ಚಿತ್ರಣ ಕೊಡುವುದಿಲ್ಲ ಎಂಬ ಅರಿವು ನನ್ನಲ್ಲಿದೆ ಎಂದಿದ್ದಾರೆ. ಕೃತಿಯಲ್ಲಿ ಕೆ.ಎಸ್. ನಿಸಾರ್ ಅಹಮದ್ ಅವರ ಬದುಕು-ಕಾವ್ಯ ಜೀವನ ಆರಂಭ, ನಿಸಾರರ ಕಾವ್ಯದ ವಿಭಿನ್ನ ನೆಲೆಗಳು, ನಿಸಾರರ ವ್ಯಕ್ತಿಚಿತ್ರ ಕವಿತೆಗಳು, ನಿಸಾರರ ಅನುವಾದ ಸಾಹಿತ್ಯ,ನಿಸಾರರ ಭಾಷಾ ವೈಷಿಷ್ಟ್ಯ, ನಿಸಾರರ ಕಾವ್ಯದಲ್ಲಿ ಉಪಮೆ, ರೂಪಕಗಳ ಅಗ್ಗಳಿಕೆ , ನಿಸಾರರ ಗದ್ಯ ಸಾಹಿತ್ಯ, ನಿಸಾರ್‍ ಅವರ ಸಾಧನೆ, ಪ್ರಶಸ್ತಿ, ಗೌರವಗಳು ಸೇರಿದಂತೆ ಅನೇಕ ವಿಚಾರಗಳಿವೆ.

About the Author

ಎಂ.ಎಸ್.ರಘುನಾಥ್
(08 January 1950)

ಮೂಲತಃ ಮೈಸೂರಿನವರಾದ ಎಂ.ಎಸ್.ರಘುನಾಥ್ ಅವರು ಜನಿಸಿದ್ದು 1950 ಜನವರಿ 8 ರಂದು. ಮೈಸೂರು ಹಾಗೂ ಬೆಂಗಳೂರನಲ್ಲಿ ಶಿಕ್ಷಣ ಪಡೆದಿರುವ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ರಾಜ್ಯದ ಹಲವಾರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ನೆರಳಿನ ರೇಖೆಗಳು ಅನುವಾದಿತ ಕೃತಿಗೆ ಶಿವಮೊಗ್ಗ ಕರ್ನಾಟ ಸಂಘ ಪುಸ್ತಕ ಬಹುಮಾನ ಬಂದಿದೆ. ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ ನೀಲಿಗುಚ್ಚ(ಯೂರೋಪಿಯನ್ ಆಯ್ದ ಕಥೆಗಳ ಅನುವಾದ), ಜವಹರಲಾಲ್‌ ನೆಹರೂ, ಪ್ರವಾಹಕ್ಕೆ ಎದುರಾಗಿ, ನೆರಳಿನ ರೇಖೆಗಳು, ಕರ್ನಲ್‌ಗೆ ಯಾರು ಬರೆಯುವುದಿಲ್ಲ, G.P Rajarathnam, Caught in the world of Binaries ...

READ MORE

Related Books