ಭಾಸ್ಕರಾಚಾರ್ಯ ವಿರಚಿತ ಲೀಲಾವತೀ

Author : ಎಸ್. ಬಾಲಚಂದ್ರರಾವ್

Pages 108

₹ 135.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಡಾ.ಎಸ್. ಬಾಲಚಂದ್ರರಾವ್ ಅವರು ಬರೆದ ಕೃತಿ-ಭಾಸ್ಕರಾಚಾರ್ಯ ವಿರಚಿತ ಲೀಲಾವತಿ (108 ಆಯ್ದ ಲೆಕ್ಕಗಳು). ಗಣಿತ ಜ್ಞಾನಶಾಸ್ತ್ರದಲ್ಲಿ ಭಾರತವು ವಿಶ್ವಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಗಣಿತ ಮತ್ತು ಖಗೋಳ ಶಾಸ್ತ್ರದಲ್ಲಿ ಪರಿಣಿತಿ ಪಡೆದಿದ್ದ (11ನೇ ಶತಮಾನ) ಭಾಸ್ಕರಾಚಾರ್ಯನು ಕರ್ನಾಟಕದ ವಿಜಯಪುರ ಜಿಲ್ಲೆಯ ಬಿಜ್ಜರಬೀಡು ಗ್ರಾಮದವನು. ಈತ ವರಾಹಮಿಹಿರ ಹಾಗೂ ಬ್ರಹ್ಮಗುಪ್ತರ ಗಣಿತ ಸಂಪ್ರದಾಯವನ್ನು ಮುಂದುವರಿಸಿದನು. ದಶಮಾನ ಪದ್ಧತಿ ಹಾಗೂ ಬೀಜಗಣಿತದಲ್ಲಿ ಅಕ್ಷರ ಪದ್ಧತಿಯನ್ನು ಮೊದಲು ಬಳಕೆಗೆ ತಂದವರೇ ಭಾಸ್ಕರಾಚಾರ್ಯರು. ತನ್ನ ಮಗಳು ಲೀಲಾವತಿಯ ಮನರಂಜನೆಗಾಗಿ ಬರೆದಿದ್ದ ಎನ್ನಲಾಗಿದ್ದ ಈ ಕೃತಿಯಲ್ಲಿ ಅಧ್ಯಯನಪೂರ್ಣವಾದ ವಿವಿಧ ಪ್ರಕಾರದ ಗಣಿತದ ಸೂತ್ರಗಳಿವೆ. ಗಣಿತದ ಸವಾಲುಗಳಿಗೆ ಪರಿಹಾರವಾಗಿ ಅನಾವರಣಗೊಳ್ಳುವ ಹೊಳವುಗಳಿವೆ ಎಂದು ಇಂದಿಗೂ ಪ್ರಶಂಸಿಸಲಾಗುತ್ತಿದೆ. ಇಂತಹ ಮಾಹಿತಿಯ ಕೃತಿ ಭಾಸ್ಕರಾಚಾರ್ಯ ವಿರಚಿತ ಲೀಲಾವತಿ.

About the Author

ಎಸ್. ಬಾಲಚಂದ್ರರಾವ್

ಎಸ್.ಬಾಲಚಂದ್ರ ರಾವ್ ಅವರು ಬೆಂಗಳೂರು ಭಾರತೀಯ ವಿದ್ಯಾಭವನದ ಗಾಂಧೀ ಸೆಂಟರ್ ಅಫ್ ಸೈನ್ಸ್ ಅಂಡ್ ಹ್ಯೂಮನ್ ವ್ಯಾಲ್ಯೂಸ್ ವಿಭಾಗದ ಗೌರವ ನಿರ್ದೇಶಕರೂ ಹಾಗೂ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.  ಆರ್ಯಭಟ, ಗಣಿತಶಾಸ್ತ್ರದ ಪ್ರವರ್ತಕರು ಮತ್ತು ಸ್ವಾರಸ್ಯಗಳು, ಭಾರತೀಯ ಖಗೋಳಶಾಸ್ತ್ರ, ಶ್ರೀನಿವಾಸ ರಾಮಾನುಜನ್, ವೇದಾಂಗ ಜ್ಯೋತಿಷ, ಭಾರತೀಯ ಖಗೋಳವಿಜ್ಞಾನದಲ್ಲಿ ಗ್ರಹಣಗಳು ಮುಂತಾದ ಕೃತಿಗಳು.  ...

READ MORE

Related Books