ಭೀಮಾ ತೀರದ ಹಂತಕರು

Author : ರವಿ ಬೆಳಗೆರೆ

Pages 185

₹ 150.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ಉತ್ತರ ಕರ್ನಾಟಕದಲ್ಲಿ ಹರಿಯುವ ಭೀಮಾ ನದಿಯ ತೀರದಲ್ಲಿ ಕುಖ್ಯಾತರಾಗಿದ್ದ ಮೂವರು ಹಂತಕರ ಜೀವನದ ಕುರಿತು ಬರೆಯಲಾದಂತಹ ಪುಸ್ತಕ ಭೀಮಾ ತೀರದ ಹಂತಕರು. ಅವರ ಜೀವನ ಮತ್ತು ಜೀವನ ಶೈಲಿಯ ಕುರಿತು ಈ ಪುಸ್ತಕದಲ್ಲಿ ವಿಸ್ತೃತವಾದ ವಿವರಣೆಯನ್ನು ನೀಡಲಾಗಿದೆ. ಕೇಶಪ್ಪ ತಾವರೆಖೇಡ, ಶಿವಾಜಿ ಬೋರಗಿ ಮತ್ತು ಚಂದಪ್ಪ ಹರಿಜನ ಈ ಮೂವರು ಭೀಮಾ ತೀರದಲ್ಲಿ ಮಾಡಿದಂತಹ ಭೀಕರ ಕೊಲೆ ಹಾಗೂ ನಡೆಸಿದ ರಕ್ತಪಾತ ಈ ಪುಸ್ತಕದ ಪ್ರಮುಖ ಕಥಾವಸ್ತು. ಪ್ರತೀ ಹಲ್ಲೆ ಅಥವಾ ಕೊಲೆಯ ಹಿಂದೆ ಏನಾದರೂ ಕಾರಣ ಇರುತ್ತದೆ. ಆ ಕಾರಣದ ಜಾಡನ್ನು ಹಿಡಿದು ಅದರ ಬೆನ್ನು ಹತ್ತಿ ಸಮಗ್ರವಾದ ವಿವರಣೆಯನ್ನು ರವಿ ಬೆಳಗೆರೆಯವರು ನೀಡಿದ್ದಾರೆ. ಪೇಲವವಾದ ವಿವರಣೆಯನ್ನು ನೀಡದೆ, ಓದುಗರು ರೋಚಕತೆಯ ಶಿಖರಕ್ಕೆ ಏರುವಂತಹ ನಿರೂಪಣೆ ಪುಸ್ತಕದ ವಿಶೇಷತೆ. ಕೇವಲ ಈ ಮೂವರು ಮಾಡಿದ ಪಾತಕಗಳನ್ನಷ್ಟೇ ವಿವರಿಸದೇ, ಇವರ ಕೃತ್ಯಗಳು ಇವರ ಸಾವಿಗೆ ಯಾವ ರೀತಿ ಕಾರಣವಾದವು, ಮತ್ತು ಈ ಮೂವರು ಎಂತಹ ಸಾವನ್ನು ಕಂಡರು ಎಂಬುದರ ಕುರಿತು ಕೂಡ ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books