ಭಿನ್ನಮತ

Author : ಮಾಧವ ಐತಾಳ್

Pages 112

₹ 150.00




Year of Publication: 2022
Published by: ಋತ
Address: ಬೆಂಗಳೂರು

Synopsys

ಸಂಗೀತ ಕಲಾವಿದ ಟಿ ಎಂ ಕೃಷ್ಣ ಅವರ ಆಯ್ದ ಬರಹಗಳ ಅನುವಾದಗಳಿರುವ ಕೃತಿ. ಲೇಖಕ ಮಾಧವ ಐತಾಳ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ವಿವಿಧ ಲೇಖಕರು ಇಲ್ಲಿನ ಬರಹಗಳನ್ನು ಅನುವಾದಿಸಿದ್ದಾರೆ. ಬೆನ್ನುಡಿಯಲ್ಲಿರುವಂತೆ, ನಮ್ಮ ಕಾಲಮಾನದ ಅಪೂರ್ವ ಕಲಾವಿದನ ಈ ಪ್ರಭಾವಶಾಲಿ ಬರಹಗಳು ಭಿನ್ನಮತಗಳನ್ನು ಹೀಗಳೆಯುವವರಿಗೆ ಕೊಟ್ಟ ಪ್ರತಿಪ್ರಹಾರ. ಇಲ್ಲಿನ ಲೇಖನಗಳು ಮೂರು ಅತಿ ದೊಡ್ಡ ರಾಜಕೀಯ ಕೆಡುಕುಗಳಾದ ನಿರಂಕುಶಶಾಹಿ, ಕೋಮುವಾದ ಹಾಗೂ ಅಸಮಾನತೆಗೆ ಮುಖಾಮುಖಿಯಾಗಿವೆ. ಈ ಪ್ರತಿಯೊಂದು ಕೆಡುಕಿಗೂ ದೀರ್ಘವಾದ ಚಾರಿತ್ರಿಕ ಹಿನ್ನೆಲೆ ಇದೆ. ಜಾತಿ ಎನ್ನುವುದು ಚಾರಿತ್ರಿಕ ವಂಚನೆ, ನೈತಿಕವಾಗಿ ಊನಗೊಂಡಂಥದ್ದು ಹಾಗೂ ಎಲ್ಲ ಅಸಮಾನತೆಗಳ ಮೂಲ. ಈ ಕೆಡುಕುಗಳು ದೇಶ ಮಾತ್ರವಲ್ಲ, ಮನುಷ್ಯರ ಘನತೆಯನ್ನೇ ಒರೆಸಿಹಾಕುತ್ತಿವೆ. ಟಿಎಂಕೆ ಹೇಳುವ ಆದರ್ಶ ಆಡಳಿತ ಬೇರೆಲ್ಲೂ ಇಲ್ಲ - ದೇಶವನ್ನು ಸೃಷ್ಟಿಸಿದ ದಾಖಲೆಯಾದ ಸಂವಿಧಾನದಲ್ಲಿ ಇದೆ.

About the Author

ಮಾಧವ ಐತಾಳ್

ಪರಿಸರ ಮತ್ತು ಇಕಾಲಜಿ ಬಗ್ಗೆ ಅಪಾರ ಕಾಳಜಿ ಇರುವ ಲೇಖಕ. ಹದಿನೈದಕ್ಕೂ ಕೃತಿಗಳನ್ನು ರಚಿಸಿದ್ದಾರೆ. ‘ಋತ’ ಎಂಬ ದ್ವೈಮಾಸಿಕ ಕೂಡ ಅವರ ಸಂಪಾದಕತ್ವದಲ್ಲಿ ಬರುತ್ತಿದ್ದು, ಈಗಾಗಲೇ ಹಲವಾರು ವಿಚಾರಗಳ ಕುರಿತು ಸಂಚಿಕೆಗಳು ಬಂದಿವೆ. ಅಕ್ಷರ ಪ್ರಕಾಶನದಿಂದ ಪ್ರಕಟವಾಗಿರುವ ಜಾಗತಿಕ ಪರಿಸರ ಚರಿತ್ರೆ, ಹಂಪಿ ವಿಶ್ವವಿದ್ಯಾಲಯ ಹೊರತಂದಿರುವ ಬತ್ತದ ಚಿಲುಮೆ, ಪಶ್ಚಿಮ ಘಟ್ಟಗಳ ಕಥೆ ಹೇಳುವ ವೈವಿಧ್ಯದ ತೊಟ್ಟಿಲು ಸೇರಿದಂತೆ 16 ಕೃತಿಗಳನ್ನು ಮಾಧವ ಐತಾಳ್ ಬರೆದಿದ್ದಾರೆ. ...

READ MORE

Related Books